Wednesday 24 June 2015


ಅನುಭಂಧದ ಕಾರಂಜಿ......ಸಣ್ಣ ಕಥೆ 



"ಅಪ್ಪನಿಗೆ ಫೋನ್ ಮಾಡಿದ್ಯೇನೆ? ನಾನು ಮೊನ್ನೆ ಮಾಡಿದ್ದಾಗ, ಯಾಕೋ.. ಶೀಲಾ ಫೋನೇ ಮಾಡಿಲ್ಲ ಅಂತ ಪೇಚಾಡ್ತಿದ್ದರು", ನೀಲಾ ಅಕ್ಕ ಫೋನ್ ನಲ್ಲಿ ಹೇಳಿದಾಗ, ಯಾಕೋ  ಏನೆಳಬೇಕೋ ತೋಚದೆ," ಹಾ...ಹಾ.. ಏನಂದೆ.. ಫೋನಾ.. ಮಾಡ್ತೀನಿ ಬಿಡುವಾಗಲಿಲ್ಲ ಇತ್ತೀಚೆಗೆ, ಈಗ ಫೋನ್ ಇಡ್ಲಾ ..."ಎಂದು ಫೋನ್ ಕಟ್ ಮಾಡಿದ್ದೆ. ನಂತರ, ಆಫೀಸ್ ಕೆಲಸದಲ್ಲೂ.. ಸರಿಯಾಗಿ ತೊಡಗಿಸಿಕೊಳ್ಳಲಾಗಿರಲಿಲ್ಲ. 

ನಾಳೆ ಶನಿವಾರ ಅದರ ನಂತರ ಬರೋ.. ಹಬ್ಬಗಳ  ರಜಾ ಸೊ.. ಲಾಂಗ್ ವೀಕೆಂಡ್ ... ಅನ್ನೋ ಗಡಿಬಿಡಿಲಿ ಎಲ್ಲರೂ... ಬೇಗ ಬೇಗ ಕೆಲಸ ಮುಗಿಸಿ ತಮ್ಮ ತಮ್ಮ ಊರಿಗೊ,ಮನೆಗೋ  ಹೋಗುವ ಆತುರದಲ್ಲಿದ್ದರು. ನಾನ್ ಹೋಗಿ ಮಾಡುವುದಾದ್ರೂ ಏನು....? ಅದೇ PG.. ಅದೇ ಒಂಟಿತನ.. ಅದರ ಬದಲು ಆಫೀಸ್ನಲ್ಲೇ ಇನ್ನೊಂದಿಷ್ಟು ಹೊತ್ತು ಕೂರೋಣ ಅನ್ನಿಸ್ತಾ ಇತ್ತು.... ಆದರೆ ನಂತರ ಕ್ಯಾಬ್ ಗಳು ಸಿಗುತ್ತಿರಲಿಲ್ಲ ವಾದ್ದರಿಂದ.. ಸಮಯಕ್ಕೆ ಸರಿಯಾಗಿ ಹೊರಟರೇನೇ ಸರಿ ಅಂತ .. ಸಿಸ್ಟಮ್ ಶಟ್ ಡೌನ್  ಮಾಡಿ ರೆಡೀ ಆದೆ. "ಆಯ್ತಾ ಶೀಲಾ, ಹೊರೋಡೊಣವಾ.. ಸದ್ಯ ನಾಳೆ ಇಂದ  ವೀಕೆಂಡ್... ಸೋಮವಾರ ಈದ್ ಮಿಲಾದ್, ಮಂಗಳವಾರ  ಕ್ರಿಸ್ಮಸ್.. ಒಟ್ಟಿಗೆ ನಾಲ್ಕು ದಿನ... ಆರಾಮಾಗಿ ಅಮ್ಮನ ಮನೆಗೆ ಹೋಗ್ತಿದೀನಿ.. ಗಂಡ ಮಗನ ಜೊತೆ, ತುಂಬಾ ದಿನ ಆಗಿತ್ತು ಅಪ್ಪ ಅಮ್ಮನ್ನ ನೋಡಿ. ನೀನು ಹೋಗ್ತಿದಿಯಲ್ಲ ಮೂಡು ಬಿದ್ರೆಗೆ ?"  ಎಂದು ಒಂದೇ ಸಮ ವಟಗುಟ್ಟಿದವಳತ್ತಾ  ನೋಡಿದೆ, "ಹ.. ಇನ್ನೂ ಡಿಸೈಡ್ ಮಾಡಿಲ್ಲ ಕಣೆ ನೇಹಾ, ನೋಡೋಣ.. ನಾಳೆ ಆದ್ರೆ ಹೋಗ್ತೀನಿ..."ಎಂದೇ ನೀರಸವಾಗಿ. ನೇಹಾ ಆಶ್ಚರ್ಯದಿಂದ "ಅದೇನೇ .. ನಾವೆಲ್ಲಾ,... ಇಂಥದೆನಾದ್ರೂ ಒಂದು ರಜಾ ಸಿಕ್ಕರೆ ಸಾಕು ಅಂತ ಕಾಯ್ತಿದ್ದರೆ, ನೀನು ಅದೇ  ಕಿತ್ತೋಗಿರೋ  PG ನಲ್ಲಿ ಇರ್ತೀನಿ ಅಂತಿಯಲ್ಲಾ..." ಎಂದವಳಿಗೆ ಏನು ಉತ್ತರಿಸ ಬೇಕೊಂತ ಯೋಚಿಸ್ತಾ ಇದ್ದೋಳಿಗೆ.. ನಮ್ಮ ರೂಟ್ ನಾ ಕ್ಯಾಬ್ ಕಾಣಿಸಿ "ಹೇ.. ನಡಿಯೇ ನೇಹಾ... ನಮ್ಮ ಕ್ಯಾಬ್ ಆಲ್‌ರೆಡೀ ಬಂದಾಗಿದೆ... " ಅಂತ ಧಾಪುಗಾಲಕಿ ಅತ್ತ ನಡೆದೇ.

PG ಗೆ ಬಂದ ಮೇಲೆ ಸಹ ಅದೇ ಗುಂಗಿನಲ್ಲಿದ್ದೆ.. ಊರಿಗೆ ಹೋಗಲೋ ಬೇಡವೋ...ಅಂತ. ಯಾಕೋ... ಹೋಗುವ ಮನಸ್ಸಾಗಲಿಲ್ಲ... ಸುಮ್ಮನಾದೆ. ಸ್ವಲ್ಪ ಹೊತ್ತು ಲ್ಯಾಪ್‌ಟಾಪ್  ಮುಂದೆ ಕೂತಿದ್ದು. ... ಎದ್ದು.. ಊಟ ಮಾಡಿ  ಬಂದೊಳಿಗೆ.. ಇನ್ನೂ ನಾಲ್ಕು ದಿನ ಹೇಗೆ ಕಳೆಯೋದು ಅನ್ನೋ ಯೋಚನೆಯಲ್ಲಿರುವಾಗಲೇ .. ಮೊಬೈಲ್ ರಿಂಗಾಯ್ತ... ನೋಡಿದರೆ ಅಮ್ಮ...

 "ಹಲೋ... ಹೇಳಮ್ಮಾ"  ಅಂದೆ.
"ಕೂಸೇ... ಊಟ ಆಯ್ತಾ..." ಅಮ್ಮನ ಕಳಕಳಿ.
"ಇದೋ ಈಗ್ತಾನೇ ಮಾಡಿ ಬಂದೆ, ನಿಂದಾಯ್ತಮ್ಮ " ಅಂದೆ.
"ಆಯ್ತು ಕೂಸೇ, ಏನೋ..ಈಸಲ ಎರಡು ಹಬ್ಬಗಳು, ಒಟ್ಟಿಗೆ ಬಂದು, ನಾಲ್ಕು ದಿನ ರಜಾ ಅಂತಲ್ಲ.. ಊರಿಗೆ ಬಾ ಕೂಸೇ... ನೋಡೋ ಹಂಗಾಗಿದೆ ... ನೋಡಿ ಆಗಲೇ ಮೂರು ತಿಂಗಳಾಗ್ತ ಬಂತು" ಅಮ್ಮನ, ಪ್ರೀತಿ ಒಸರೊ.. ದ್ವನಿ ಕೇಳಿ... ಗಂಟಲು ಒತ್ತಿ ಬಂತು.
"ನನಗೂ ನಿನ್ನ ನೋಡೋ ಹಾಗಾಗಿದೆಯೇ...ನೀನೇ ಬರಬಾರದ....ಇಲ್ಲಿಗೆ." ನುಗ್ಗಿ ಬಂದ ಅಳು ನುಂಗಿ  ಕೇಳಿದೆ.
"ಅದೆಲ್ಲ ಆಗೋಲ್ಲಾ ಅಂತ ನಿನಗೆ ಗೊತ್ತಲ್ಲ ಕೂಸೇ... ನೀನೇ ಬಾ.. ಇಲ್ಲ ಅನ್ನ ಬೇಡ..." ಎಂಬ ಅಮ್ಮನ ಮಾತಿಗೆ... ಬರೆ ಹೂಂ ಗುಟ್ಟಿದೆ.
"ಕಾಯ್ತಿರ್ತೀನಿ, ನಾಳೆ ಬಂದು ಬಿಡ್ತಿಯಲ್ಲ...ಇವತ್ತು ರಾತ್ರಿ ಹೋರ್ಡ್ತ ಇದೀಯಲ್ಲಾ  ಅಲ್ಲಿಂದ??" ಅದಕ್ಕೂ ಹೂಂ ಗುಟ್ಟಿದೆ.
 "ಸರಿ ಇಡ್ತೀನೆ" ಅಂತ ಅಮ್ಮ ಒದ್ದೆ ಧನಿಯಲ್ಲಿ ಹೇಳಿ ಫೋನ್ ಕಟ್ ಮಾಡಿದರು.

ಇನ್ನೂ ಯೋಚಿಸ್ತಾ ಕೂತ್ರೆ.. ಬಸ್ಸು ಸಿಗೋಲ್ಲ ಅಂತ... ಟೈಮ್ ನೋಡಿದೆ .. 8.30...ಮೆಜೆಸ್ಟಿಕ್ ಇಲ್ಲಿಂದ ಅರ್ಧ ಗಂಟೆ...ಯಾವುದಾದ್ರೂ ಬುಸ್ ಸಿಕ್ಕೇ ಸಿಗುತ್ತೆ ಅಂತ.. ಕೈಗೆ ಸಿಕ್ಕ ನಾಲ್ಕು ಬಟ್ಟೆ ಬ್ಯಾಗಿಗೆ ತುರುಕಿ ಹೊರಟೇ ಬಿಟ್ಟೆ.

ಮೆಜೆಸ್ಟಿಕ್ ನಲ್ಲಿ  ಇಳಿದಾಗ... ಜನ ಜುಂಗುಳಿ ನೋಡಿ..... ಒಮ್ಮೆ ಭಯವಾಯ್ತು.. ಬಸ್ ಬುಕ್ ಮಾಡಿಲ್ಲ ಏನೂ ಇಲ್ಲ... ಬುಸ್ಸು ಸಿಗುತ್ತೊ ಇಲ್ಲವೋ ಅಂತ... ಅದೂ... back to back ನಾಲ್ಕು ದಿನ ರಜಾ... ಎಲ್ಲರೂ ಊರಿಗೋಗೋ ಆತುರ. ಅಂತೂ ಇಂತೂ  ಹೇಗೋ ರಾಜಹಂಸ ದಲ್ಲಿ ಒಂದು ಸೀಟ್ ಸಿಕ್ಕಿ ಹತ್ತಿ ಕೂತದ್ದಾಯ್ತು, ಕೊನೆ ಸೀಟ್ ಬೇರೆ.. ಇನ್ನೂ ನಿದ್ದೆ ಮಾಡಿದ ಹಾಗೆ ಇದೆ....!.
 ಸರಿ.. ಬುಸ್ ಫುಲ್ ಆದದ್ದರಿಂದ... ಸರಿಯಾದ ಸಮಯಕ್ಕೆ ಹೊರಟಿತು.

ಊರಿಗೆ ಹೋಗಲೇ ಬಾರದೆಂದು ಕೊಂಡಿದ್ದವಳಿಗೆ, ಅಮ್ಮನ ದ್ವನಿ.. ಎಳಿದುಕೊಂಡು ಹೊರಟಿತ್ತು.

ಸೀಟೀಗೆ ತಲೆಯೊರಗಿಸಿದವಳಿಗೆ.. ಬಾಲ್ಯದ ನೆನಪು.....ಒಂದರ ಮೇಲೊಂದು ... ಕಣ್ಣಿಗೆ ಕಟ್ಟ ತೊಡಗಿತು


ನೀಲಾ,ಶೀಲಾ ಇಬ್ಬರೇ ಮಕ್ಕಳು ಮಂಜಯ್ಯ ಮತ್ತು ಶಾಂತಮ್ಮನಿಗೆ, ಮಂಜಯ್ಯ ಹೆಗಡೇರು.. ಮೂಡಗೆರೆ ಯ ಹತ್ತಿರದ.. ಕಬ್ಬಿನಗದ್ದೆಯವರು. ಸಾಕಷ್ಟು ಗದ್ದೆ, ತೋಟ ...ಸುಖಿ ಸಂಸಾರ ನಡೆಸಲು.. ಆದರೆ.. ದುರಾಸೆ... ಧರ್ಪದ ಮಂಜಯ್ಯ ನಿಗೆ ಸಂತೃಪ್ತಿ ಎಂಬುದೇ  ಇಲ್ಲ.. ಗಂಡು ಮಗುವಾಗಲಿಲ್ಲಾಂಬ ಅಸಂತೃಪ್ತಿ ಹೆಂಡತಿಯ ಮೇಲೆ... ಸದಾ ಹೊಡೆಯುವುದೋ.. ಬೈಯ್ಯುವುದಕ್ಕೊ... ಕಾರಣವಾದರೆ.....
ಎಷ್ಟೇ.. ಬೆಳೆ ಬಂದರೂ.. ಪಕ್ಕದ ತೋಟದ ಮಲ್ಲಿಕಾರ್ಜುನ  ಹೆಗಡೇರಷ್ಟು ಬೆಳೆ ಯಾಗಲಿಲ್ಲವೆಂಬ.. ಅಸಂತೃಪ್ತಿ... ಕೆಲ್ಸದವರ ಮೇಲೆ...ಸದಾ... ವಟ ವಟಗುಟ್ಟುತ್ತಾ... ಬೈಗಳಿಗೆ ಕಾರಣವಾಯ್ತು....
ಹಸ್ಲರ ಮೇಲೆ ಸದಾ..."ನಿಮ್ಮ ಜಾತಿಯೇ ಕಳ್ಳ ಜಾತಿ... ನಿಮಗೆ ಸಲಿಗೆ ಕೊಟ್ಟಷ್ಟು... ನಮ್ಮ ತಲಿ ಮೇಲೆ ಕಾರ ಅರೀತಿರಿ, ನಾಯಿ ನಾ ಸಿಂಹಾಸನದ ಮೇಲೆ ತಂದಿಡಲಾದಿತೆ" ಅಂತ... ಅವರನ್ನು ತುಳಿಯುವ ಪಣಹೋತ್ತವರಂತೆ ಸದಾ..ಅವರನ್ನು ಕಂಡಾಗಲೆಲ್ಲ ನಾಲ್ಕು ಕಣ್ಣು..ನಾಲ್ಕು ಬಾಯಿ ಮಂಜಯ್ಯನವರಿಗೆ.


ನೀಲಾ.. ಮೊದಲ ಮಗಳಾದ್ದರಿಂದ.. ಅವಳ ಮೇಲೆ ಸ್ವಲ್ಪ ಪ್ರೀತಿ ಇತ್ತು. ಆದರೆ ಎರಡನೇದು ಹೆಣ್ಣಾ ದಾಗ... ನಿರಾಸೆಗೊಂಡಿದ್ದ ಮಂಜಯ್ಯ... ಹೆಂಡತಿ ಮಗಳ ಮುಖವನ್ನ ಒಂದು ವಾರ ನೋಡಿರಲಿಲ್ಲ.

 ಹಾಗಾಗಿ,,, ಶೀಲಾ ಅಮ್ಮನ ಮಗಳಾಗೆ ಉಳಿದಿದ್ದಳು. ಎಲ್ಲದರಲ್ಲೂ ತಾರ ತಮ್ಯ ಮಂಜಯ್ಯನವರದು. ನೀಲಾ ಬಿಟ್ಟ ಬಟ್ಟೆ, ಆಟಿಕೆ, ಪುಸ್ತಕಗಳಿಂದಲೇ... ಶೀಲಾ ಓದಿದ್ದು, ಬೆಳದಿದ್ದು. ಅಮ್ಮನ ಪ್ರೀತಿಯೊಂದಿಲ್ಲದಿದ್ದಾರೆ ಏನಾಗಿರುತ್ತಿದ್ದಳೋ.

ಒಂದೆರಡು ಘಟನೆಗಳು... ಅಪ್ಪ ಅನ್ನುವ ಗೌರವ ವನ್ನು ಸಹ ದೂರ ಮಾಡಿತ್ತು. 

ಒಮ್ಮೆ ನೀಲಾ, ಸುಮಾರು 12 ವರ್ಷದವಳಿರ ಬಹುದು,ಹಸ್ಲರಾ ಕಾನನ ಮಗ ಸಣ್ಣನ, ಜೊತೆ ಆಡುತ್ತಿದ್ದಳು, ಸಣ್ಣಾನು ನೀಲಾಳ ವಯಸ್ಸಿನವನೇ, ಅಡಿಕೆ ಗರಿಯ ಟೋಪಿ ಮಾಡುವುದನ್ನು ಹೇಳಿಕೊಡುತ್ತಿದ್ದ... ದೂರದಿಂದಲೇ.
ನೀಲಾಳಿಗೆ ಏನನ್ನಿಸಿತೋ.. ಸಣ್ಣನ ತಲೆ ಮೇಲಿನ ಟೋಪಿ ತೆಗೆದು.. ತನ್ನ ನೆತ್ತಿಯ ಮೇಲಿಟ್ಟುಕೊಂಡುಬಿಟ್ಟಳು, ಅದೇ ಸಮಯಕ್ಕೆ ಸಣ್ಣ, "ಬ್ಯಾಡಿ ಅಮ್ಮೋರೇ... ಅದನ್ನು ಕೊಟ್ಟು ಬಿಡಿ, ನಿಮ್ಮ ಅಪ್ಪೋರು ನೋಡಿದ್ರೆ..." ಅಂತ ಭಯದಿಂದಲೇ ಅವಳ ನೆತ್ತಿಯ ಮೇಲಿಂದ ತೆಗೆದುಕೊಳ್ಳಲು ಕೈ ಹಾಕಿದ್ದನಷ್ಟೇ.. ಎಲ್ಲಿದ್ದರೋ ಮಂಜಯ್ಯ... " ಏನೋ... ಬಡವ .. ಮೈ ಮೇಲಿನ ಕಬರು ಎಲ್ಲದೋ ನಿಂಗೆ " ಎಂದು ಅಲ್ಲೇ ಬಿದ್ದಿದ್ದ ಬಿದಿರಿನ ಕಡ್ಡಿಯನ್ನೆತ್ತಿ ಹಿಂದೆ ಮುಂದೆ ನೋಡದೆ... ಹೊಡೆಯಲು ಶುರು ಮಾಡಿಬಿಟ್ಟರು.....ಅನಿರೀಕ್ಷಿತ ವಾಗಿ ಬಿದ್ದ ಏಟುಗಳಿಂದ, ಸಣ್ನನಿಗೆ ಬಾಯಿ ತೆಗೆಯಲೂ ಆಗದಂಥ ಭಯ..ಚಡ್ಡಿ ಒದ್ದೆ ಮಾಡಿಕೊಂಡು... ನೆಲದ ಮೇಲೆ ಬಿದ್ದಿದ್ದವನನ್ನು, ಅಲ್ಲೇ ಕೆಲಸ ಮಾಡುತ್ತಿದ್ದ ಅವರಪ್ಪ, ಕಾನ.. ಓಡಿ ಬಂದು ಅವುಚಿ ಕೊಂಡಿದ್ದ.

"ಅಯ್ಯಾರೆ ಬಿಟ್ಟು ಬಿಡಿ.. ಏನು ಅರೀದ ಕಂದನ ಮ್ಯಾಲೆ ಹೀಂಗೆ ಕೈ ಮಾಡಿರಲ್ಲ.. ಮನುಸಥ್ವ ಆದ ನಿಮ್ಗೆ" ಎಂದು ಮಗನನ್ನು ತಬ್ಬಿಕೊಂಡು ಅತ್ತಿದ್ದ. "ನಂಗೆ, ಮನುಸಥ್ವದ ಬಗ್ಗೆ ಹೇಳ್ತಿಯೆನ್ಲಾ... ಬಡ್ಡಿ ಮಗನೇ......ಯಾರತ್ರ ಹೇಂಗಿರಬೇಕಂತ ತಿಳಿಸೋದು ಬ್ಯಾಡೇನ್ಲಾ ನಿನ್ ಮಗಂಗೆ" ಅಂತ ಅವನ ಬೆನ್ನ  ಮೇಲೂ ಒಂದೇಟು ಹಾಕಿದ್ದರು.

ಎಲ್ಲಾ ನೋಡುತ್ತಿದ್ದ ... ನೀಲಾ ಹನಿಗಣ್ಣವಳಾಗಿದ್ದರೆ, 8 ವರ್ಷದ ಶೀಲಾ, ತಾನೂ ಚಡ್ಡಿ ಒದ್ದೆ ಮಾಡಿಕೊಂಡು ಭಯದಿಂದ.. ಕಂಪಿಸುತ್ತಿದ್ದಳು. 

ನಂತರದ ದಿನಗಳಲ್ಲಿ... ಶೀಲಾ ಅಪ್ಪನಾ ಬಳಿ ಹೋಗುವುದಿರಲಿ, ಮಾತಾಡುವುದಿರಲಿ, ಅವರಿದ್ಡಕಡೆ ಸುಳಿಯುತ್ತಲೂ ಇರಲಿಲ್ಲ.. ಎಲ್ಲ ಅಮ್ಮನ ಬಳಿಯೇ... ಬೆಳೆದದ್ದು. ಅಮ್ಮನ ಸೆರಗಿನ ಮರೆಯಲೇ...

ಆದರೆ ಓದಿನಲ್ಲಿ ಜಾಣೆಯಾದ ಶೀಲಾ... ಊರಿಗೆ, ಓದಿದ ಶಾಲಾ, ಕಾಲೇಜಿಗೆ  ಒಳ್ಳೆ ಹೆಸರು ತಂದಿದ್ದಳು... ಆಗೆಲ್ಲ ಮಂಜಯ್ಯ... ಹೆಮ್ಮೆಯಿಂದ ಬೀಗಿ... ಚಿಕ್ಕ ಮಗಳನ್ನು ಪ್ರೀತಿಸ ತೊಡಗಿದ್ದರು. ನೀಲಾ PUC ಮಾಡಲಾಗದೆ ಮನೆಯಲ್ಲೇ..ಕೂತು.. 2 ವರ್ಷಗಳೇ ಕಳೆದಿದ್ದವು... ದೂರದ ನೆಂಟ ರ ಹುಡುಗನೇ...ಬೆಂಗಳೂರಿನಲ್ಲಿ ಬ್ಯಾಂಕ್ ಕೆಲಸದಲ್ಲಿ ಇದ್ದ ನಟರಾಜ ನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು.

ಈಗೀಗ.. ಎಲ್ಲ ಸರಿ ಇದೆ  ಅನ್ನೋವಷ್ಟರಲ್ಲಿ, ಮತ್ತೊಂದು ಘಟನೆ... ಶೀಳಾಳಿಗೆ.. ತಂದೆಯನ್ನು... ದ್ವೇಷಿಸಿ ದೂರವೇ ಇಡುವಂತೆ ಮಾಡಿತ್ತು.

ಶೀಲಾ BSc, ಮಾಡುತ್ತಿದ್ದಳು, ಹಸ್ಲರ ಅಣ್ಣಯ್ಯ, ಸಹ ಅದೇ ಕಾಲೇಜಿ ನಲ್ಲಿ BA ಓದುತ್ತಿದ್ದ.  ಅಣ್ಣಯ್ಯನ ಅಪ್ಪ ಮುನಿಯ ಪಕ್ಕದ ತೋಟದ ಮಲ್ಲಿಕಾರ್ಜುನ ಹೆಗಡೇರ ತೋಟದಲ್ಲಿ ಕೆಲಸ ಮಾಡುವವ.. ಮಲ್ಲಿಕಾರ್ಜುನ ಹೆಗಡೇರು, ಹಸ್ಲರ ಮಕ್ಕಳನ್ನು ಓದಿ.. ಮುಂದೆ ಬರಲು ತುಂಬಾನೇ ಸಹಕಾರ, ಪ್ರೋತ್ಸಾಹ ನೀಡಿದ್ದರು.

ಅವರಲ್ಲೆಲ್ಲ.. .. ಮುಂದು ಬಂದಿದ್ದವನೆಂದರೆ ಮುನಿಯನ ಮಗ, ಅಣ್ಣಯ್ಯ ಒಬ್ಬನೇ...

ಒಮ್ಮೆ ಕಾಲೇಜಿ ನಿಂದ ಬರುವುದು ಲೇಟ್ ಆಗಿ, ಕತ್ತಲಾಗಿ ಬಿಟ್ಟಿತ್ತು, ಶೀಲಾಳ ಹಿಂದೆ ಬಸ್ ಇಳಿದ ಅಣ್ಣಯ್ಯ, ಕತ್ತಲ ದಾರಿಯಲ್ಲಿ ಶೀಲಾ ಒಬ್ಬಳೇ ನಡೆಯುವುದನ್ನು ಕಂಡು "ಅಮ್ಮೋರೇ, ಕತ್ತಲಲ್ಲಿ ಹುಳು ಹುಪ್ಪಟೆ, ಕಾಟ... ನಾನು ನಿಮ್ಮ ಮನೆಯವರೆಗೂ ಬಿಟ್ಟು ಬರ್ತೇನೆ ನಡೀರಿ" ಎಂದು ಜೊತೆಯಾಗಿ ಬಂದಿದ್ದ.

ಮನೆಯಲ್ಲಿ, ಮಂಜಯ್ಯ... ಕತ್ತಲಾಗಿ ಇನ್ನೂ ಮಗಳು ಬರಲಿಲ್ಲವೆಂದು.. ಟಾರ್ಚ್ ಹಿಡಿದು ತಾವೇ ಕರೆದು ಬರಲು ಹೊರಟಿದ್ದರು... ದಾರಿಯಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಂಡು ಬರುತ್ತಿರುವ ಮಗಳು ಮತ್ತು  ಪಕ್ಕದ ತೋಟದ ಹಸ್ಲರ ಅಣ್ಣಯ್ಯ ನನ್ನು  ಕಂಡು.. ದೂರ್ವಾಸರಾಗಿದ್ದರು. ಎದುರಿಗೆ ಅಪ್ಪನನ್ನು ಕಂಡು ...ಸ್ವಭಾವತ ಭಯಸ್ಥೆಯಾದ ಶೀಲಾ... ಗಾಬರಿಯಿಂದ... "ಅಪ್ಪ...ಅದೂ ಅದೂ... " ಅಂದಿದ್ದಳು.
ಅಣ್ಣಯ್ಯ ಇದ್ಯಾವುದರ ಪರಿವೆ ಇಲ್ಲದೆ.. "ನಂಸ್ಕಾರ ಅಯ್ಯ, ಕತ್ತಲಾಗಿತ್ತು ಅಂತ ಅವ್ವೊರ್ನ ಮನಿಗೆ ತಲುಪಿಸೋಣ ಅಂತ ಬರ್ತಿದ್ದೆ... ನಾನಿನ್ನು ಬರ್ತಿನಯ್ಯ" ಅಂತ... ನಮಸ್ಕರಿಸಿ ಹಿಂತಿತುಗಿದ್ದ.

ಆದರೆ... ಮಂಜಯ್ಯ ಅರ್ಥಯಸಿದ್ದೇ ಬೇರೆ... " ಹಸ್ಲರ  ಮುಂಡೆ ಮಕ್ಕಳಿಗೆ, ಬ್ರಾಹ್ಮಣರ ಹೆಣ್ ಮಕ್ಕಳ ಮೇಲೆ ಕಣ್ಣಾ ಕೋಷ್ಟು ಸೊಕ್ಕು ಬಂದದೇನು...., ಆ ಮಲ್ಲಿಕಾರ್ಜೂನುಂಗೆ ಹೊಡಿಬೇಕು... ಹಸ್ಲರ ಮಕ್ಕಳು ಓದಬೇಕಂತ.. ಓದಿ... ಏನು ಗುಡ್ಡೆ ಹಾಕಬೇಕಂತ... ಇವನ್ನ ಶಾಲಿ ಗೆ ಕಳಿಸಿದನೋ..." ಅಂತ ದಾರಿಯುದ್ದಕ್ಕೂ.. ಸಿಡಿಗುಟ್ಟತ್ತಲೇ ಬಂದಿದ್ದರು.

"ಇಲ್ಲಪ್ಪ... ಕತ್ತಲಗಿತ್ತು ಅಂತ... ಮನೆಯವರೆಗೂ ಬಿಡ್ತೇನೆ ಅಂತ ಬಂದ ಅಷ್ಟೇ...ಅವನು... ಇದುವರೆಗೂ... ನನ್ನೊಟ್ಟಿಗೆ ಮಾತಾಡಿದ್ದೆ ಇಲ್ಲ....."ಎಂದು ಹೇಳ ಹೊರಟವಳನ್ನು ತಡೆದು "ನೀ ಸುಮ್ನಿರು ಕೂಸೇ... ಇವೆಲ್ಲಾ ಹೀಂಗೆ  ಚಿಗರ ಕಂಡು... ಒಂದಿನ ನಮ್ಮ ಬ್ರಾಹ್ಮಣರ ಹೆಣ್ ಮಕ್ಕಳ ತಲೆ ಕೆಡಸಿ... ಮದುವೆ ಆಗೋಕ್ಕು ಹೇಸವೊಲ್ಳ... ಕಳ್ಳ ಜಾತಿ ನನ್ಮಕ್ಕಳು" ಎಂದು ಬುಸುಗುಟ್ಟಿದ್ದರು.
ನಂತರ ಅದೇನು ಮಾಡಿದರೋ.. ಅಣ್ಣಯ್ಯ ಕಾಲೇಜನಿಂದ.. ಡಿಬಾರ್ ಆಗಿದ್ದ.. ಅದು... ಯಾವುದೌ ಹುಡುಗಿಯನ್ನು ಛೇದಿಸಿ ...ಮಾನಭಂಗ ಮಾಡಲೆತ್ನಿಸಿದ್ದಾನೆಂಬ ಆಪಾದನೆ ಮೇಲೆ.....! ಯಾರಾ ಹುಡುಗಿ ಅನ್ನೋ ನಿಜ ಇಂದಿಗೂ ಗೊತ್ತಿಲ್ಲ.. ಇದೆಲ್ಲವನ್ನೂ ಮಾಡಿಸಿದ್ದು  ಮಂಜಯ್ಯ ಅಂತ ಮಾತ್ರ ಖಾತ್ರಿ ಆಗಿತ್ತು ಶೀಳಾಳಿಗೆ... ನನ್ನಿಂದಾಗಿ ಅವನ ವಿದ್ಯೆ... ಜೀವನ ಹಾಳಾಯ್ತು ಅನ್ನೋ ಕೊರಗಲಿ... ಶೀಲಾ...ಪಟ್ಟ ವೇದನೆ ಅಷ್ಟಿಷ್ಟಲ್ಲ..

ಶೀಲಾಗೆ ಅಪ್ಪನ ಬಗ್ಗೆ ಅಸಹ್ಯ...ಹೇಸಿಗೆ... ಬೇಸರ... ಅವರತ್ತ ಸುಳಿಯುವುದು ಇಲ್ಲ.... BSc ಮುಗಿಸಿ... ಬೆಂಗಳೂರಿನಲ್ಲಿ, ಕೆಲಸದಲ್ಲಿದ್ದಾಳೆ. ತಾಯಿಗಾಗಿ ಊರಿಗೋಗಲು ಮನ ಹಂಬಲಿಸಿದರೂ.. ಅಪ್ಪನ ಮುಖ ನೋಡಲು.. ಮನ ಹಿಂಜರಿಯುತ್ತದೆ...
 ಆದರೆ ಇತ್ತೀಚ್ಗೆ... ಮಂಜಯ್ಯ... ಜರ್ಜರಿತರಾಗಿದ್ದಾರೆ... ಮುಪ್ಪಿನ ಕಾಯಿಲೆ... ಮಗಳಿಗೆ ಮದುವೆ ಮಾಡಬೇಕೆಂಬ ಹಂಬಲ ವಾದರೆ... ಕಡ್ಡಿ ತುಂಡು ಮಾಡುವಂತೆ ಮಾತಾಡುವ ಶೀಲಾ ಮದುವೆಗೆ ಒಪ್ಪುತ್ತಿಲ್ಲ.

ಶೀಲಾಳ, ತಾಯಿಯೂ ಒಮ್ಮೊಮ್ಮೆ ಮಗಳ ಮೇಲೆ ರೇಗಿದ್ದುಂಟು "ಕೂಸೇ... ನಿನ್ನದು ಅತೀ ಆಯ್ತು... ನಿನ್ನ ಅಪ್ಪಯ್ಯ ಅವರು..ನಿನ್ನ ಮೇಲಿನ ಪ್ರೀತಿಗೆ ಹೇಳತಾರೆ... ನಿನಗೆ.. ಮಾತಾಡಲು... ಪುರುಸೊತ್ತಿಲದಂಗೆ ಆಡ್ತಿಯಲ್ಲೇ...ನಿಜ...ಅವರು ಕೋಪಿಷ್ಟನೇ ಆದರೆ... ಮಗಳೆಂಬ ಪ್ರೀತಿ ಕೊಡೋದು ನಿನ್ನ ಕರ್ತವ್ಯ ಅಲ್ಲೇನು"... ಅಂತ... 

"ಯಾರ್ರೀ ...ಮೂಡು ಬಿದ್ರೆ... "ಅನ್ನೋ ಕಂಡಕ್ಟರ್ ದ್ವನಿ ಕೇಳಿ.. ಎದ್ದು ನಿಂತ ಶೀಲಾ... ತನ್ನ ಬ್ಯಾಗೆತ್ತಿಕೊಂಡು ಇಳಿದಳು... ಥರಾಗುಟ್ತಿಸುವ ಚಳಿಗೆ ದುಪ್ಪಟ್ಟಾ ಮತ್ತಷ್ಟು ಗಟ್ಟಿಯಾಗಿ ಸುತ್ತಿಕೊಂಡು, ಅತ್ತಿತ್ತ ನೋಡಿದಳು.. ಯಾವುದು... ಆಟೋ ಕಾಣಲಿಲ್ಲ... ಸರಿ... ಬೆಳಗಾಗುವರೆಗೂ...ಬಸ್ಸ್ಟ್ಯಾಂಡ್ ನಲ್ಲೇ ಕಾಯುವುದೆಂದು ಅತ್ತ ನಡೆಯ ಬೇಕೆನಿಸುವಷ್ಟರಲ್ಲೇ... 

"ಕೂಸೇ..." ಅಪ್ಪನ ಧನಿ... ಮಫ್ಲೆರ್ ಸುತ್ತಿ ಸ್ವೆಟರ್ ತೊಟ್ಟ ಅಪ್ಪ, ಆ ಡಿಸೆಂಬರ್ ಚಳಿಲಿ ನಡುಗುತ್ತಾ ನಿಂತಿದ್ದರು.. ಆ ಕನ್ನಡಕದ ಹಿಂದಿದ್ದ ಕಂಗಳಲ್ಲಿ ಪ್ರೀತಿಯ ಸೆಲೆ...ಮತ್ತಷ್ಟು ದೇಹ ಬಾಗಿತ್ತು.. ಜರ್ಜರಿತವಾಗಿದ್ದರು.
ಜೊತೆಯಲ್ಲೇ.. ಅನತಿ ದೂರದಲ್ಲಿ... ಹಸ್ಲರ ಕಾನನ ಮಗ... ಸಣ್ಣ......! ಗಾಡಿಯೊಂದಿಗೆ ಕೈ ಕಟ್ಟಿ ನಿಂತಿದ್ದ. ಶೀಲಾಳಿಗೆ ಪ್ರೀತಿಯುಕ್ಕಿತು ಅಪ್ಪನ ಮೇಲೆ..."ಅಪ್ಪಾ...." ಅನ್ನುತ್ತಾ ಅವರೆಡೆಗೆ ನಡೆದಳು...

"ಬಂದ್ಯಾ ಕೂಸೇ.. ಏನೂ ತ್ರಾಸಾಗಿಲ್ಲ ಅಲ್ಲ.. ನಿಮ್ಮವ್ವ ಹೇಳಿದ್ಲು.. ನೀ ಬೆಳಗ್ಗೇನೇ ಬರ್ತಿ ಅಂತ.. ಅದಕ್ಕೆ ಹೊಂಟು ಬಂದೆ" ತಲೆ ನೇವರಿಸಿದ ಅಪ್ಪನತ್ತ.. ಇಷ್ಟು ದಿನ ತೋರದ ತನ್ನ ಪ್ರೀತಿಯ ನೋಟ ಬೀರಿದಳು ಶೀಲಾ....
ಪೂರ್ವದಲ್ಲಿ ಸೂರ್ಯ.. ತನ್ನ ದಿನಚರಿಯ ಪ್ರಾರಂಬಿಸಲು ತಯಾರಿ ನಡೆಸಿದುದರ ಕುರುಹಾಗಿ... ಬಾನೆಲ್ಲ ಕೆಮ್ಪೆತ್ತಿತ್ತು.....
ನಿಮ್ಮಅನಿಸಿಕೆ ,ಸಲಹೆ .. ಟೀಕೆ.. ಟಿಪ್ಪಣಿಗಳಿಗೆ..  ಸದಾ ಸ್ವಾಗತ..



Monday 22 June 2015

ಬಾಲ್ಯದ ಪ್ರಿಯಾ ಗೆಳತಿ.... ಎಲ್ಲಿರುವೇ...

ನಾನು ಪ್ರೈಮರೀ ಸ್ಕೂಲ್ನಲ್ಲಿ ದ್ದಾಗ, ನಾಲ್ಕನೇ ತರಗತಿಗೆ  ರಶ್ಮಿ ಅನ್ನೋ ಹುಡುಗಿ ಹೊಸ್ದಾಗಿ ಸೇರಿದ್ಲು ಆ ವರ್ಷ, ರಶ್ಮಿ ಯಾವ ಊರಿಂದ ಬಂದಿದ್ದಳು ಅಂತ ನನಗೆ ಸರಿಯಾಗಿ ನೆನಪಿಲ್ಲ. ಆದರೆ, ಹೊಸದಾಗಿ ಸೇರಿದೋಳ ಜೊತೆ ನಾವೆಲ್ಲ.. ನಾ ಮುಂದು ನೀ ಮುಂದು ಅಂತ ಅವಳ ಜೊತೆ ಮಾತಾಡೋಕೆ ಮುಗಿಬಿದ್ದಿದ್ವಿ ... ಅವಳೂ.. ತಾನೂ ಬೇರೆ ಊರಿಂದ ಬಂದಿರೋ ಗತ್ತನ್ನ.. ನಮ್ಮತ್ರ ಚೆನ್ನಾಗೇ ತೋರಿಸಿದ್ಲು.ನಂತರದ ದಿನಗಳಲ್ಲಿ... ರಶ್ಮಿ ಮತ್ತು ನಮ್ಮ ಗೆಳೆತನ ಚೆನ್ನಾಗೇ ಬೆಳೀತು. ಅವಳೂ ಓದುವುದರಲ್ಲಿ ನಮ್ಮ ಸರಿ ಸಮವೇ... 


ಅವಳ ಅಪ್ಪ.. AEO (assistant educational officer) ಆಗಿದ್ದರು.. ಹಾಗಾಗಿ ಅವಳೂ ಸ್ವಲ್ಪ ನಮಗಿಂತ ಮೇಲೆ ಅನ್ನೋತರ ಟೀಚರ್ಸ್ ಸಹ ನಡಿಸ್ಕೊಲ್ತ ಇದ್ದದರಿಂದ... ಅವಳಿಗೂ ಸ್ವಲ್ಪ ಜಂಬ ಇದ್ದೇ ಇತ್ತು. ಆದರೆ.. ನನ್ನ ಮತ್ತು ಅವಳ ಸ್ನೇಹಾ..ತುಂಬಾನೇ ಚೆನ್ನಾಗಿತ್ತು. ನಾನು ಸಂಗೀತ ಕಲಿಯುತ್ತಿದ್ದ ದಿನಗಳು, ಅವಳಿಗೆ ದೈವದತ್ತವಾಗಿ ಬಂದ ಕಂಠ.. ಎಲ್ಲ ಸ್ಕೂಲ್ ಪ್ರೋಗ್ರಾಮ್ ನಲ್ಲೂ  ಚೆನ್ನಾಗೇ  ಇಬ್ಬರು ಭಾಗವಹಿಸ್ತ ಇದ್ವಿ..


ಶಾಲೆ ಇಂದ ನಮ್ಮ ಮನೆ ದೂರ ವಿದ್ದದ್ದರಿಂದ ನಾನು ಊಟದ ಡಬ್ಬಿ ತೆಗೆದು ಕೊಂಡೋಗುತ್ತಿದ್ದೆ, ರಶ್ಮಿಯ ಮನೆ ಶಾಲೆಗತ್ಟಿರಾ ಲಂಚ್ ಬ್ರೇಕ್ ನಲ್ಲಿ.. ನನ್ನನ್ನು ಬಿಡದೆ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು.. ಹಾಗಾಗಿ  ನನಗೆ ತುಂಬಾನೇ ಪರಿಚಯ.. ಅವಳ ಮನೆಯವರೆಲ್ಲಾ.


ಅವಳಿಗೆ 3 ಅಕ್ಕಂದಿರು, ಒಬ್ಬಳು ತಂಗಿ, ಒಬ್ಬ ತಮ್ಮ,..6  ಜನ ಮಕ್ಕಳ ದೊಡ್ಡ ಕುಟುಂಬ.. ಕೆಲವೊಮ್ಮೆ  ನನಗೆ ಅವರ ಮನೆಯವರ ಹೆಸರುಗಳೇ ನೆನಪಿರುತ್ತಿರಲಿಲ್ಲ.. ಇಲ್ಲ ಕನ್ಫ್ಯೂಷನ್  :-( 


ಶನಿವಾರ .. ಭಾನುವಾರಗಳಂದು ಅವಳು ನಮ್ಮ ಮನೆಗೆ ಬರುತ್ತಿದ್ದಳು.. ನಮ್ಮದು ತುಂಬಾ ದೊಡ್ಡ ಕಾಂಪೌಂಡ್.... ಎಷ್ಟೊಂದು ಮರ ಗಿಡ.. ಆಡಲು ಜೋಕಾಲಿ.. ಹಾಗಾಗಿ (ಈಗ ಅದೆಲ್ಲ ಇಲ್ಲ... ಬಾಡಿಗೆ ಮನೆಗಳನ್ನು ಕಟ್ಟಿಸಿದೇವೆ ಖಾಲಿ ಜಗದಲ್ಲೆಲ್ಲ....). ಆರನೇ ತರಗತಿಯವರೆಗೂ ಜೊತೆಯಲ್ಲೇ ಓದಿದ್ದೆವು, ಅವಳ ತಂದೆಗೆ ವರ್ಗ ವಾದದ್ದರಿಂದ ಅವಳು ದೊಡ್ಡಬಳ್ಳಾಪುರಕ್ಕೆ ಹೊರಟು ಹೋದಳು.. ನಂತರವೂ.. ನಾವು ಪತ್ರ ದ ಮೂಲಕ  ಟಚ್ ನಲ್ಲಿದ್ದೆವು.. ಸುಮಾರು ಪತ್ರಗಳು,,
ಹತ್ತನೇ ತರಗತಿವರೆಗೆ ಸಾಲು ಸಾಲು ಪತ್ರ .. ತಿಂಗಳಿಗೊಮ್ಮೆ ಎಂಬಂತೆ, ಅವರ ತಂದೆಗೆ ಮತ್ತೆ  ವರ್ಗವಾಗಿದ್ದರಿಂದ.. ಅವಳು ಮತ್ತೆ ಬೇರೆ ಉರಿಗೆ ಹೋದ ಮೇಲೆ.. ನಮ್ಮ ಗೆಳೆತನ ಕೊನೆಗೊಂಡಿತ್ತು, ಅನ್ನೋದಕ್ಕಿಂತ.. ನಮ್ಮ ಪತ್ರ ವ್ಯವಹಾರ ನಿಂತಿತ್ತು.


ನನಗವಳ  ಬದಲಾದ ವಿಳಾಸ ತಿಳಿದಿರಲಿಲ್ಲ. ನನ್ನ PUC ಮುಗಿದ ಸಮಯದಲ್ಲಿ ಒಮ್ಮೆ ಪತ್ರ ಬರೆದಿದ್ದಳು... ಆಗ ನಮ್ಮ ಮನೆಗೆ ಲ್ಯಾಂಡ್ ಲೈನ್ ಫೋನ್ ಬಂದಿತ್ತು, ನಂಬರ್ ಕೊಟ್ಟು ಫೋನ್ ಮಾಡಲು ಬರೆದಿದ್ದೆ. ಒಮ್ಮೆ ಫೋನ್ ಸಹಾ ಮಾಡಿದ್ದಳು ಅಮ್ಮಣ್ಣಿ ಕಾಲೇಜ್/' ಮಹಾರಾಣಿ ಕಾಲೇಜ್ ನಲ್ಲಿ  BSc ಮಾಡುತ್ತಿರುವುದಾಗಿ ಹೇಳಿದ್ದಳು.. ನಂತರ ಪತ್ರ ವ್ಯವಹಾರವೂ ಇಲ್ಲ . ಫೋನು ಇಲ್ಲ...
ರಶ್ಮಿ, ಇಂದ್ಯಾಕೋ ತುಂಬಾ ನೆನಪಾಗಿದ್ದಾಳೇ....ಅವಳನ್ನು ಹುಡುಕುವ ಎಲ್ಲಾ ಪ್ರಯತ್ನವೂ ಮಾಡಿದೆ..through social networking...ಪ್ಚ್...ಪ್ಚ್... nope... I couldn't  find her.. ರಶ್ಮಿ ಎಲ್ಲೇ ಇದ್ದರೂ ಚೆನ್ನಾಗಿರಲಿ ಅನ್ನೋ ಹಾರೈಕೆಯೊಂದಿಗೆ... ಮತ್ತು ಈ ಬ್ಲೋಗ್ ಮೂಲಕವಾದ್ರೂ ಸಿಗಲಿನ್ನೊ ಆ ಸಣ್ಣ ಆಸೆಯೊಂದಿಗೆ.. ಈ ಬ್ಲಾಗ್ ನಾ, ಈ ಪೋಸ್ಟ್ ...:-)



Saturday 13 June 2015

ಅಣ್ಣನ ಕೈಲಿ ತಿಂದ ಮೊದಲ ಹಾಗೂ ಕೊನೆ ಏಟು....!...!!!



ನಾನಾಗ ನಾಲ್ಕೂವರೆ ಇಲ್ಲ ಐದು ವರ್ಷದವಳಿರಬಹುದು, ಮನೇಲಿ ಅಮ್ಮನ ಜೊತೆ ಒಬ್ಬಳೇ, ಅಮ್ಮ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರೋರು, ನಾನು ನನ್ನ ಬೊಂಬೆಗಳ ಜೊತೆ, ಅಕ್ಕನ್ದಿರಿಬ್ಬರು ಸ್ಕೂಲ್ ಗೆ ಹೋಗಿರ್ತ ಇದ್ದರು. ನನಗೂ ಸ್ಚೂಲ್‌ಗೆ ಹೋಗ್ಬೇಕು ಅಂತ ತುಂಬಾ ಆಸೆ ಇತ್ತು ಆಗ, ಆದರೆ ಇನ್ನೂ ಚಿಕ್ಕವಳು ಅಂತ ಸ್ಕೂಲ್ ಗೆ ಸೇರಿಸಿರಲಿಲ್ಲ. 6 ವರ್ಷಕ್ಕೆ ಒಂದೇ ಸಲ ಒಂದನೇ ಕ್ಲಾಸ್ ಗೆ ಅಡ್ಮಿಶನ್ ಮಾಡಿಸೋಣ ಅಂತ.


ಸರಿ, ಅವತ್ತು ಅಷ್ಟೇ ಎಂದಿನಂತೆ ಅಣ್ಣ ನೈಟ್ ಶಿಫ್ಟ್ ಮಾಡಿ ಬಂದು ಮಲಗೀದಾರೆ, ಅಮ್ಮ ಅಕ್ಕನ್ದಿರಿಬ್ಬರನ್ನು ಸ್ಕೂಲ್ ಗೆ ಕಳಿಸಿ, ಮುಂದಿನ ಬಾಗಿಲು ಹಾಕಿ, ಮನೆ ಕೆಲಸ ಎಲ್ಲಾ ಮಾಡಿ, ಬಟ್ಟೆ ಒಗಿಲಿಕ್ಕೆ ಅಂತ ಹಿತ್ತಿಲ ಕಡೆ ಹೋಗಿದಾರೆ. ನಾನು, ಮನೇಲೇ ಚೇರ್ ಮೇಲೆ, ಗೊಂಬೆ ಗಳ ಜೊತೆ ಆಟ ಆಡ್ತಾ ಇದೀನಿ, ಗೊತ್ತು ಶಬ್ಧ ಮಾಡ್ಬಾರದು ಅಂತ.. ಯಾಕಂದ್ರೆ ನಮ್ಮ ಅಣ್ಣಾ(ಅಪ್ಪನನ್ನ, ನಾವು ಅಣ್ಣಾ ಅಂತಾನೆ ಕರೆಯೋದು) ತುಂಬಾನೇ ಸ್ಟ್ರಿಕ್ಟ್, ಅವರು ನಿದ್ದೆ ಮಾಡುವಾಗ ಒಂದು ಚೂರು ಶಬ್ದ ವಾಗಬಾರದು. ನಾವು ಮೂರು ಜನ ಅಕ್ಕ ತಂಗೀರು ಮನೇಲಿದ್ದರೂ, ಅಣ್ಣ ಮಲಗಿದ್ದರೇ, ಒಂದು ಚೂರು ಗಲಾಟೆ ಮಾಡದೆ ಆಡ್ತಿದ್ವಿ.ನನ್ನ ದೊಡ್ಡಕ್ಕ, ತುಂಬಾನೇ ಪ್ರೀತಿ ನನ್ನ ಕಂಡರೆ, ತಾನೇ ನನಗೆ ಕಥೆ ಹೇಳಿ ಮಲಗಿಸೋದು, ಆಟ ಆಡಿಸೋದು....ಎಲ್ಲಾ.


ಸರಿ, ನಾನು ಆಡ್ತಾ ಇದೀನಿ , ಅಂತ ಅಮ್ಮ ನೆಮ್ಮದಿಯಾಗಿ ಬಟ್ಟೆ ಓಗಿತಾ ಇದಾರೆ. ನಾನು ಎಷ್ಟೊತ್ತು ಅಂತ ಆಡಲಿ, ಬೇಜಾರಾಯ್ತು, ಚೇರ್ ಇದ್ದದ್ದು ಮೇನ್ ಡೋರ್ ಪಕ್ಕದ ಕಿಡಕಿ ಅತ್ರ, ಸರಿ, ಚೇರ್ ಮೇಲೆ ನಿಂತು ಹೋಗರನ್ನು ಬರೋರನ್ನು ನೋಡ್ತಾ ನಿಂತುಕೊಂಡೆ, ಅಷ್ಟರಲ್ಲಿ, ನಮ್ಮ ಮನೆ ಪಕ್ಕದಲ್ಲಿರೋ, ಮಹಾಲಕ್ಷ್ಮಿ ಸ್ಚೂಲಿಗೆ ಹೋಗ್ತಾಇರೋದು ಕಾಣಿಸ್ತು, ನನಗೂ ಆಕ್ಷಣಾ ತುಂಬಾನೇ ಆಸೆ ಆಗೋಯ್ತು,"ಮಾಲಚ್ಚಕ್ಕ... ಮಾಲಚ್ಚಕ್ಕ" ಕರೆದೆ ಮೆಲ್ಲಗೆ, ಅಣ್ಣನ ರೂಮಲ್ಲಿ ಫ್ಯಾನ್ ಜೋರಾಗಿ ಇತ್ತಾದರಿಂದ, ಅವರಿಗೆ ಕೇಳಿಸಿರೋ ಸಾದ್ಯತೆ ಇಲ್ಲ. ಸರಿ.. ಕಿಡಕಿ ಅತ್ರ ಬಂದ ಮಾಲಚ್ಚಕ್ಕಾ, "ಏನು, ಪುಟ್ಟಿ' ಅಂದ್ಲು, "ನಾನು ಸ್ಕೂಲ್ ಗೆ ಬರ್ತೀನಿ" ಅಂದೆ. ಅದೇನಂದಾಳೋ.. ನನಗೆ ಸರಿಯಾಗಿ ನೆನಪಿಲ್ಲ. ಆದ್ರೆ, ನಾನು ಚೇರ್ ಸಹಾಯದಿಂದ ಮೇನ್ ಡೋರ  ನಾ ಮೇಲಿನ ಬೋಲ್ಟ್ ತೆಗೆದು, ಚಪ್ಪಲಿ ಮೆಟ್ಟಿ ಹೊರಟೆ ಬಿಟ್ಟೆ ಅವಳ ಜೊತೆ. ನನಗೇನು ಗೊತ್ತಿತ್ತಾಗ, ಸ್ಕೂಲ್ ಗೆ ಸೇರಿದೋರು ಮಾತ್ರ ಹೋಗ ಬೇಕು.. ಇಲ್ಲಾಂದ್ರೆ ಮನೆಲೇ ಇರಬೇಕು ಅಂತ. ಆಗೆಲ್ಲ ಸರ್ಕಾರಿ ಸ್ಚೂಲ್‌ನಲ್ಲೇ ನಮ್ಮ ವಿದ್ಯಾಬ್ಯಾಸ ನಡೆದಿದ್ದು. ನಮ್ಮ ಅಕ್ಕಂದಿರಿದ್ದ ಸ್ಚೂಲೆ ಮಾಲಚ್ಚಕ್ಕನು ಓದ್ತಾ ಇದ್ದದ್ದು, ಆದ್ರೆ ಅವಳು ಏಳನೇ ಕ್ಲಾಸ್. ನಮ್ಮದೊಡ್ಡಕ್ಕ 5ನೇ  ಕ್ಲಾಸ್, ಸಣ್ಣಕ್ಕ ಮೂರನೇ ಕ್ಲಾಸ್.ಸರಿ ನಾನು ಮಾಲಚ್ಚಕ್ಕ ನ ಕೈ ಹಿಡಿದು ನಡೆಯಲಾರಂಬಿಸಿದೆ.. ಸ್ಕೂಲ್ ಮನೆಯಿಂದ ತುಂಬಾನೇ ದೂರ. ಮಾಲಚ್ಚಕ್ಕ ನನ್ನ ಸ್ವಲ್ಪ ದೂರ ಎತ್ತಿಕೊಂಡ್ಲು ಸೊಂಟದ ಮೇಲೆ. ಸರಿ ಸ್ಕೂಲ್ ಗೆ ಬಂದಮೇಲೆ, ಅವಳು ತನ್ನ ಕ್ಲಾಸ್ ರೂಮಿಗೊಗೋಕಿಂತ ಮುಂಚೆ,"ಇದು, ನಿಮ್ಮ ದೊಡ್ಡಕ್ಕನ ಕ್ಲಾಸ್ ರೂಮ್, ಇದು ನಿಮ್ಮ ಸಣ್ಣಕ್ಕನ ಕ್ಲಾಸ್ ರೂಮ್ "ಅಂತ ದೂರದಿಂದಲೇ ತೋರಿಸಿದ್ಲು, ಸರಿ ಆಮೇಲೆ ಅವಳ  ಕ್ಲಾಸ್ ಗೆ ಅವಳು ಹೋದ್ಲು. ನಾನು ಅಲ್ಲೇ ಮೈದಾನದಲ್ಲಿ ಆಡ್ತಾ ಇದ್ದ ಮಕ್ಕಳ ಜೊತೆ ಆಡೋದಕ್ಕೆ ಶುರು ಮಾಡ್ದೆ, ಆ ಮಕ್ಕಳು ಒಂದನೇ ಕ್ಲಾಸ್  ಇರಬೇಕು.. ನಾನು ಎಲ್ಲರಿಗಿಂತ ಪುಟ್ಟವಳು, ಚೆನ್ನವಾದ ಫ್ರೋಕ್ ಹಾಕಿದ್ದೆ, ಸೊ.. ಎಲ್ಲರೂ ಸೇರಿ ಆಟ ಆಡೂದ್ವಿ. ಆಮೇಲೆ ಸುಮಾರು ಹೊತ್ತಾದ ಮೇಲೆ ಒಬ್ಬ ಮಾಸ್ಟರ್ ಬಂದು, ಎಲ್ಲರನ್ನೂ ಕ್ಲಾಸ್ ರೂಮಿಗೆ ಕರಕೊಂಡೊದ್ರು, ನಾನೂ ಹೋಗಿ ಅವರ ಜೊತೆಲೇ ಕೂತೆ, ಮಾಸ್ಟರ್ ಬೋರ್ಡ್ ಮೇಲೆ ಆ ಆ ಇ ಈ ಬರೆದು, ನಮ್ಗೆಲ್ಲರಿಗೂ ಬರೆಯೋಕೆ ಹೇಳಿದ್ರು, ಅವರಿಗಿನ್ನೂ ನಾನು ಹೊಸಬಳು ಅಂತ ಗೊತ್ತೇ ಆಗಿರಲಿಲ್ಲ. ಸರಿ ಎಲ್ಲರತ್ರಾನು  ಸ್ಲೇಟ್  ಬಳಪ ಇದೆ , ಆದ್ರೆ ನನ್ನ ಹತ್ರ ಇಲ್ಲ. ಆಗ ಆ ಮಾಸ್ಟರ್ ನನ್ನ ಕಡೆ ನೋಡಿದ್ರು. "ಯಾರಿದು ಹೊಸ ಪುಟ್ಟಿ, ಎಲ್ಲಿ ನಿನ್ನ ಸ್ಲಟು ಬಳಪ " ಅಂದ್ರು. ಆ ವಯಸಲ್ಲಿ ಭಯ ಎಲ್ಲಾ ಏನು ಅಂತಾನೆ ಗೊತ್ತಿರಲ್ಲ ಅಲ್ವಾ.. ನಾನು ಹೇಳಿದೆ, "ಇಲ್ಲ ನನ್ಹತ್ರ", ನಿನ್ನ ಹೆಸರೇನು, ಯಾರಾ ಮನೆ ಅಂತ ಎಲ್ಲ ವಿಚಾರಿಸಿಕೊಂಡ್ರು, ನಾನೂ ದೈರ್ಯವಾಗೆ ನನ್ನ ಇಬ್ಬರು ಅಕ್ಕಂದಿರೂ ಇದೆ ಸ್ಚೂಲ್‌ನಲ್ಲಿ ಯಾವ ಯಾವ ಕ್ಲಾಸ್ ನಲ್ಲಿ ಓದೋದು ಅಂತ ಹೇಳಿದೆ. ಅವರು ಆಗ, 'ಹೊ...ಎಲ್ಲೋ ಸ್ಕೂಲ್ ಅಬ್ಯಾಸ ಆಗ್ಲಿ ಅಂತ ನನ್ನ ಕರೆತಂದಿದರೆ' ಅಂತ ಅನ್ಕೊಂಡು, ಮುದ್ದು ಮುದ್ದಾಗಿದ್ದ ನನ್ನ, ಎತ್ತಿ ಮುದ್ದಿಟ್ಟು ಮತ್ತೆ ಕೂಳಿಸಿದ್ರು. ಸರಿ ಆಮೇಲೆ.. ಏನೆಲ್ಲ ಮಾಡಿದೆನೋ ಗೊತ್ತಿಲ್ಲ, ನೆನಪಿಲ್ಲ.  

ಇತ್ತ, ಬಟ್ಟೆ ಒಗೆದು ಬಂದ ಅಮ್ಮ, ಮನೆ ಬಾಗಿಲು ತೇಗಿದಿರೋದು ನೋಡಿ.. ಗಾಬರಿಯಾಗಿದರೆ.. ನಾನು ಬೇರೆ ಕಾಣಿಸ್ತಿಲ್ಲ..... ಹೊರಗಡೆ ಎಲ್ಲಾ ಹುಡುಕಿದಾರೆ. ಎಲ್ಲೂ ಇಲ್ಲ.. ಆ ಬೀದಿಲಿರೊ ಎಲ್ಲ ಮನೆಗಳಲ್ಲೂ ಹುಡುಕಿದರೆ... ನಾನು ಸಿಕ್ಕಿಲ್ಲ. ಅಮ್ಮನ ಸ್ಥಾನದಲ್ಲಿ, ಇವತ್ತು ನಾನು ಇದ್ದು ನೆನೆಸಿಕೊಂಡರೆ.. ಅಮ್ಮ ಪಟ್ಟಿರಾ ಬಹುದಾದ.. ಧುಖ, ಸಂಕಟ, ಭಯ ನಿಜಾವಾಗ್ಲೂ ಯಾವ ತಾಯಿಗೂ ಬೇಡ ಅನ್ನಿಸುತ್ತೆ. 

ಮನೆ ಬೀಗ ಹಾಕಿಕೊಂಡು ಅಕ್ಕ ಪಕ್ಕದ ಬೀದಿ, ಮೇನ್ ರೂಡ್ ನಾ ಅಂಗಡಿಗಳ ಕಡೆ ಎಲ್ಲ ಕಡೆ ಹುಡುಕಿದರೆ ನಾನು ಸಿಕ್ಕಿಲ್ಲ. ಅಷ್ಟರಲ್ಲಿ ಅದೇ ಉರಲ್ಲಿದ್ದ ನಮ್ಮ ಚಿಕ್ಕಮ್ಮ( ತಾಯಿಯ ದೂರದ ಸಂಭಂದಿ) ಸಿಕ್ಕಿ, ಇಬ್ಬರೂ ಎಲ್ಲಾ ಕಡೆ ಹುಡುಕಿದಾರೆ. ನನ್ನ ಪತ್ತೆ ಇಲ್ಲ. ಸರಿ ಮನೆಗೆ ಬಂದು, ಅಣ್ಣನಿಗೆ ಹೇಳೋಕೆ ಅಮ್ಮನಿಗೆ ಭಯ, ಮೊದಲೇ ಅಣ್ಣಾ,, ದೂರ್ವಾಸ ಮುನಿ ಕೋಪದಲ್ಲಿ, ಹೇಳದೆ ಇರೋಕು ಆಗೋಲ್ಲ. ಸರಿ ಮದ್ಯಾನ್ಹ  3 ಗಂಟೆ ವರ್ಗೂ ಹುಡುಕಿ ಹುಡುಕಿ ಸಾಕಾಗಿ .. ನಿದಾನವಾಗಿ ಅಣ್ಣನನ್ನ ಎಬ್ಬಿಸಿ ಅಮ್ಮ, ಹೇಳಿದರೆ, ಮೊದಲೇ ನಿದ್ದೆ ಮಂಪರಿನಲ್ಲಿದ್ದ ಅಪ್ಪನಿಗೆ ....ಮೊದಲು ಅರ್ಥ ಆಗಿಲ್ಲ... ಆಮೇಲೆ ಮತ್ತೇ.. ಎಲ್ಲಾ ಕಡೆ ಹುಡುಕಾಡಿದರೆ..  ಆದರೆ.. ನಾನು ಸಿಕ್ಕಿಲ್ಲ. ಅಮ್ಮನಂತು ಸಾಯೋಷ್ಟು ಭಯದಿಂದ.. ತತ್ತರಿಸಿದರೆ.. ಇತ್ತ ಕಡೆ.. ಮೊದಮೊದಲು ದೈರ್ಯವಾಗಿದ್ದ ಅಣ್ಣಾ, ನಾನು ಎಲ್ಲೂ ಕಾಣಿಸದೆ ಇದ್ದ  ಭಯ ದಲ್ಲಿ, ಅಮ್ಮನಿಗೊಂದು ಕೆನ್ನೆಗೆ ಬಾರಿಸಿದ್ದರು ಸಹ.. 'ಮಗುನಾ ಸರಿಯಾಗಿ ನೋಡ್ಕೊಳೋಕೆ ಆಗೊಲ್ವ ಅಂತ"... ಅಮ್ಮ ಭಯದಲ್ಲಿ  ಏನೂ ಮಾಡಲು ತೋಚದೆ ಅಳೋದಕ್ಕೂ ಶಕ್ತಿ ಇಲ್ಲದೆ ಕೂತಿದಾರೆ.  ಆಗ ಸ್ವಲ್ಪ ಮಕ್ಕಳ ಕಳ್ಳರು ಜಾಸ್ತಿನೇ.. ನಮ್ಮ ಅಣ್ಣನಿಗೆ ಅದೇ ತಲೇಲಿ ಸುಳಿತ ಇದ್ದದ್ದು.. ಎಲ್ಲೋ.. ನನ್ನ, ಮಕ್ಕಳು ಕಳ್ಳರೇ ಎತ್ತ್ಕೊಂಡೋಗಿ ಬಿಟ್ಟಿದಾರೆ ಅಂತ.  ಸರಿ ಪೋಲೀಸ್ ಕಂಪ್ಲೈಯೆಂಟ್ ಕೊಡೋಣ ಅಂತ ಅಣ್ಣಾ ತೀರ್ಮಾನಿಸಿ ರೆಡೀ ಆದ್ರು. 



ಇತ್ತ ಸ್ಚೂಲ್‌ನಲ್ಲಿ. ಎಲ್ಲ ಕ್ಲಾಸ್ ಗಳೂ ಮುಗೀತಿದ್ಡಾಗೆ, ನಾನು ನನ್ನ ದೊಡ್ಡಕ್ಕನ ಕ್ಲಾಸ್ ನಾ ಹೊರಗೆ ನಿಂತು ಕಾಯ್ತಿದ್ದೀನಿ(ಮಾಲಚ್ಚಕ್ಕ ತೋರಿಸಿದ್ಲಲ್ಲ), ಅವರ ಕ್ಲಾಸ್ ಬಿಟ್ಟೊಡನೆ... "ಸುನೀತಕ್ಕಾ..." ಅಂತ ಅವಳ ತೆಕ್ಕೆಗೆ ಬಿದ್ದೊ ಳನ್ನ.. ಅಕ್ಕ ಎತ್ತಿ ಮುದ್ದಿಸಿ .. "ನೀನಿಲ್ಲಿ,,,,??? ಅಮ್ಮ ಬಂದಿದರಾ...?" ಅಂತೆಲ್ಲ ಕೇಳಿದಳು. ನಾನು ಇಲ್ಲ ಅಂತ.. ಬೆಳಿಗ್ಗೆ ಇಂದ ಆದದ್ದನ್ನೆಲ್ಲ ಹೇಳಿದೆ ಏನೋ ಮಹಾ ಕಾರ್ಯ ಸಾಧಿಸಿದೋಳ ಹಾಗೆ.....

 ಸರಿ ಇಬ್ಬರು ಅಕ್ಕಂದಿರ ಜೊತೆ ನಾನು ಮನೆಗೆ ಹೊರಟೆ. ಸುನೀತಕ್ಕ ನನ್ನ ಉಪ್ಪು ಕೂಸು ಮಾಡಿಕೊಂಡೆ ಎತ್ತಿಕೊಂಡು ಬಂದ್ಲು ಅಷ್ಟೂ ದೂರ ಪಾಪ., ಅವಳಿಗೆ ಮನೆಲಿ ಆಗಿರ್ಬಹುದಾದ ಪಜೀತೀ ಬಗ್ಗೆ ಯಾವುದೇ ಸುಳಿವಿರಲಿಲ್ಲ.ಮನೆ ಹತ್ರಾಗುವಷ್ಟರಲ್ಲಿಬೀ, ಅಣ್ಣಾ ಸೈಕಲ್ನ ಮನೆಯಿಂದ ಆಚೆ ನಿಲ್ಸಿದ್ದರು. ಪೋಲೀಸ್ ಸ್ಟೇಶನ್ ಗೆ ಹೋಗಬೇಕು ಅಂತ, ಸರಿ ಮನೆಗೆ ಹೋದ ಮೇಲೆ, ಅಣ್ಣನಿಗೆ ನನ್ನ ನೋಡಿದ ಸಂತೋಷಕ್ಕಿಂತ.. ಅವರಿಗಾಗಿದ್ದ  ಭಯ ಗಾಬರಿನೆ ಒಂದು ಕೈ ಜಾಸ್ತಿ ಇತ್ತು. ಸರಿ.. ಸುನೀತಕ್ಕನ ಕಡೆ ಕೋಪ ಹೋಯ್ತು.. ಅವಳೇ ನನ್ನ ಸ್ಚೂಲ್‌ಗೆ ಕರಕೊಂಡೋಗಿರೋದು ಅಂತ.. ಆದರೆ ಅವಳಿಂದ ಗೊತ್ತಾಗಿದ್ದು ನಾನು ಮಾಲಚ್ಚಕ್ಕನ ಜೊತೆ ಹೋಗಿದ್ದರ ಬಗ್ಗೆ. ಸರಿ ಅದೆಲ್ಲಿತ್ತೊ ಕೋಪ ಅಣ್ಣನಿಗೆ, ಸೈಕಲ್ ಫಾಕ್ಸ್ (ಸೈಕಲ್ ಚಕ್ರದ ಕಂಬಿ), ಕೈಗೆ ತಗೊಂಡೋರೆ... ಬಿಟ್ಟರು ಬಿಟ್ಟ್ರು....ನನಗೆ, ಅಳಲು ಕೂಡ ಶಕ್ತಿ ಇಲ್ಲದೆ ನಿಂತಿದ್ದೆ, ಒಂದಲ್ಲ, ಎರೆಡಲ್ಲಾ.. ಸುಮಾರು ಏಟು,, ಅಡ್ಡ ಬಂದ ಅಮ್ಮನಿಗೂ ಬಿತ್ತು. ಚಿಕ್ಕಮ್ಮ "ಬೇಡ ಭಾವ ಮಗು ಬಿಡಿ ಬಿಡಿ" ಎನ್ನುತಿದ್ದರೂ... ಅಣ್ಣನಿಗೆ ಅರಿವಿಲ್ಲ. ಮೈ ಎಲ್ಲ ಬಾಸುಂಡೆ.. ಕೆಂಪಗಿನ ಬರೆ.. ನನ್ನ ಏಳೇ ಮೈ ಮೇಲೆಲ್ಲಾ... ನನಗೆ ಕೂಯೀ ಮಿಯೀ ಅನ್ನಲು ಬಾಯಿಲ್ಲ. ದೈರ್ಯವಿಲ್ಲ. 

ಅಮ್ಮ ನನ್ನ ಎಳೆದುಕೊಂಡೋಗಿ ರೂಮಲ್ಲಿ ತಬ್ಬಿಕೊಂಡು ಗೋಳೋ ಎಂದು ಅಳಲು ಶುರು ಮಾಡಿದ್ರು.. ನನಗೂ ಅಳು.. ಆದ್ರೆ.. ಎಷ್ಟು ನೋವಿತ್ತು.. ಏನಾಗ್ತಾ ಇತ್ತು ಅಂತ ನನಗೆ ನಿಜವಾಗ್ಲೂ ನೆನಪಿಲ್ಲ.. ಸ್ವಲ್ಪ ಹೊತ್ತಿಗೆ ಅಮ್ಮನ ತೊಡೆ ಮೇಲೆ ನಿದ್ದೆ ಮಾಡಿದ್ದೆ.  ಅಣ್ಣಾ ... ನೈಟ್ ಶಿಫ್ತಿಗೊಗುವಾಗ್ಲೂ ನಾನು ಮಲಗಿಯೇ ಇದ್ದೇನಂತೆ.. ಮಲಗಿದ್ದವಳನ್ನೇ ನೋಡಿ ಅಣ್ಣಾ... ಮೈಗೆ ಏನಾದ್ರೂ ಹಚ್ಚಲು ಹೇಳಿ ಹೋದ್ರು. ಆ ರಾತ್ರಿ ನನಗೆ  ಎದ್ದದ್ದೂ ನೆನಪಿಲ್ಲ, ಊಟ ಮಾಡಿದ್ದು ನೆನಪಿಲ್ಲ. 

ಆದ್ರೆ.. ಬೆಳಗ್ಗೆ ಎದ್ದಾಗು.. ಅಣ್ಣಾ ನನ್ನ ಪಕ್ಕದಲ್ಲೇ ಕೂತಿದ್ರು. ನೈಟ್ ಶಿಫ್ತಿಗೆ ಅಂತ ಹೋದ ಅಣ್ಣಾ ನಾ ಕೈಲಿ ಕೆಲಸ ಮಾಡಲಾಗಲಿಲ್ಲವಂತೆ ಅಯ್ಯೋ ಮಗೂಗೆ ಹೊಡೆದು ಬಿಟ್‌ನಲ್ಲ.. ಅನ್ನೋ ಹಪ ಹಪಿ..ತಳಮಳ.. ಸಂಕಟ.. ದುಖಃ.., ಅರ್ಧ ರಾತ್ರಿ ಸುಮಾರು, ಹನ್ನೆರಡೋ.. ಒಂದು ಗಂಟೆಗೆಲ್ಲ 6 ಮೈಲಿ, ಸೈಕಲ್ ತುಳಕೊಂಡು  ಮನೆಗೆ ವಾಪಸ್ ಬಂದೋರು.. ನನ್ನ ಪಕ್ಕನೆ ಕೂತಿದ್ರಂತೆ. ಬೆಳಗ್ಗೆ ಎದ್ದ ನನ್ನ ಮುದ್ದಿಸಿದ್ದೋ ಮುದ್ದಿಸಿದ್ದು.. ಅಮ್ಮನ ಕೈಲಿ ನನ್ನ ರೆಡೀ ಮಾಡಿಸಿ.. ಮರತ್‌ಹಳ್ಳಿ ಗೆ ಕರಕೊಂಡು ಹೋಗಿ ಸಿನೆಮಾ ತೋರಿಸಿ.. ಹೋಟೆಲ್‌ನಲ್ಲಿ ಮಸಾಲೆ ದೋಸೆ , ಹೋರ್ಲೀಕ್ಸ್ ಕೊಡಿಸಿ ಮನೆಗೆ ಕರಕೊಂಡು ಬಂದಿದ್ದರು. ಅಮ್ಮ ಮತ್ತು ಅಕ್ಕಂದಿರಿಗೂ ಬೇಕರಿ ತಿಂಡಿಗಳು.... :-0

ಈಗಲೂ.. ನನಗೆ ... ಈ ಘಟನೆ ನೆನಪಾಗೋದು ಯಾಕೆ ಅಂದ್ರೆ.. ಅದಾದ ಮೇಲೆ ಅಣ್ಣಾ ನನಗೆ ಯಾವತ್ತೂ ಹೊಡೆದಿರಲಿಲ್ಲ. ನಾನು ಅವರ ಮುದ್ದಿನ ಮಗಳೆ ಅಂದಿಗೂ.. ಇಂದಿಗೂ.

ಸ್ಚೂಲಿಗೊಗೊ ಮಕ್ಕಳನ್ನೆಲ್ಲ.. ನಮ್ಮ ಬೀದಿಯಲ್ಲಿ ನೋಡುವಾಗ.. ಈ ಘಟನೆ ನೆನಪಾಯ್ತು.. ಅದಕ್ಕೆ ಶೇರ್ ಮಾಡಿದೆನೆ.. :-)

ನಿಮ್ಮ ಸಲಹೆ ಸೂಚನೆಗಳಿಗೆ.. ಸದಾ ಸ್ವಾಗತ

Monday 8 June 2015

ಮರೆತರೂ ಮರೆಯಲಿ ಹ್ಯಾಂಗಾ...........ಮ್ಯಾಗಿ.. ಮ್ಯಾಗಿ... ಮ್ಯಾಗಿ....!!!


 ಮರೆತರೂ ಮರೆಯಲಿ ಹ್ಯಾಂಗಾ.....Inspired by Malathisanchyinda :  Maggie mania
(http://malathisanchiyinda.blogspot.in/2015/06/good-bye.html)

ಮ್ಯಾಗಿ ಟೂ ಮಿನಿಟ್ಸ್ ನೂಡಲ್ಸ್,
      ಮ್ಯಾಗಿ ಕಪ್ ನೂಡಲ್ಸ್, 
ಮ್ಯಾಗಿ ಮಲ್ಟೀಗ್ರೇನ್  ನೂಡಲ್ಸ್, 
ಮ್ಯಾಗಿ  ಆಟ್ಟ ನೂಡಲ್ಸ್, 
ಮ್ಯಾಗಿ ಓಟ್ಸ್ ನೂಡಲ್ಸ್....
ಓ ದೇವರೇ,....ಎಷ್ಟು ವೆರೈಟೀ ಇತ್ತು. ಮನೆಯಲ್ಲಂತೂ ಯಾವಾಗ್ಲೂ ಸ್ಟಾಕ್ ಇರೋದು . ಯಾಕಂದ್ರೆ  ಮನೇಲಿ ನಾನು, ಕೀರ್ತಿ(ನನ್ನ ಪ್ರೀತಿಯ ಯಜಮಾನರು), ಇಬ್ಬರೇ ಆದ್ದರಿಂದ.. ಅಡುಗೆ ಮಾಡಲು ಬೇಜಾರಾದಾಗಲೆಲ್ಲಾ.. ಮ್ಯಾಗಿ ವೆರೈಟೀ! ಸವಿಯಲು ಸಿದ್ದ.


 ನನಗೆ ಮ್ಯಾಗಿ ಕಪ್ ನೂಡಲ್ಸ್ ಇಷ್ಟ ಆದ್ರೆ, ಕೀರ್ತಿ ಗೆ ಮ್ಯಾಗಿ ಓಟ್ಸ್ ನೂಡಲ್ಸ್. ನಾನು ಎಷ್ಟಾದ್ರೂ easy way of cooking ಇಷ್ಟ ಪಡುವವಳು. ಎಲೆಕ್ಟ್ರಿಕ್ ಕೆಟ್ಲ್ ನಲ್ಲಿ ನೀರು ಕುದಿಸು, ಕಪ್ ನೂಡಲ್ಸ್ ಗೆ ಸುರಿ, 3-4 ನಿಮಿಷ ಬಿಡು...slurp.... slurp..... ಅಂತ ತಿಂದು ಮುಗಿಸು.
ಕೀರ್ತಿಗೆ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ, ಗರಂ ಮಾಸಲಾ ಹಾಕ್ಲೇಬೇಕು...(ಪಾಪ ಅವರೇ ತರಕಾರಿ ಕಟ್ ಮಾಡಿ ಕೊಡೋದು in fact).


ನಮ್ಮ ತಂದೆ ಮೊನ್ನೆ(ಭಾನುವಾರ) ಬಂದಿದ್ದಾಗ ಕೇಳ್ತಿದ್ರು, ಇನ್ನೂ ನೂಡಲ್ಸ್ ತಿಂತಿದೀರಾ ಅಂತ... "ಇಲ್ಲ ಅಣ್ಣಾ " ಅಂತ ಬಾಯಲ್ಲಿ ಹೇಳಿದೆನಾದ್ರೂ... ಮನೆಲಿ ಇನ್ನೂ 2-3 ಪ್ಯಾಕೆಟ್ ಮ್ಯಾಗಿ ಹಾಗೇ ಇತ್ತು....!


ನಾನು, ಕೀರ್ತಿ ವರ್ಷಕೊಮ್ಮೆ ಅಥವಾ ಎರೆಡು ಸಲ, ಚೀನಾ ಶವೋಲಿನ್ ಟ್ರಿಪ್ ಹೋಗ್ತೀವಿ, (China Shaolin temple- for Kungfu training), ವೆಜಿಟೆರಿಯನ್ ಆದ ನಮಗೆ ಆ ಒಂದು - ಒಂದೂವರೆ ತಿಂಗಳು ಡೈಯೆಟ್ ಮಾಡೋಕೆ ಒಳ್ಳೆ ಚಾನ್ಸ್. ಯಾಕಂದ್ರೆ. ಅವರ ಊಟ ನಮ್ಮ ಕೈಲಿ ಮಾಡೋಕಾಗೊಲ್ಲ. ಹಾಸ್ಟಲ್  ನಲ್ಲಿ ವೆಜ್ ಬೇರೆಯಾಗೇನೋ ಬೆಯ್ಸ್ತಾರೆ.. ಆದರೆ ಉಪ್ಪಿಲ್ಲ ...ಕಾರ ಇಲ್ಲ..., ಸುಮ್ನೆ ಸೌತೆಕಾಯಿನೋ.. ಆಲೂಗಡ್ದೇನೋ, ಸೆಲೆರಿ ಸೊಪ್ಪೋ, ಎಲೆ ಕೋಸೋ ಇಲ್ಲಾಂದ್ರೆ.. ಸೋಯಾ ಮೊಳಕೆ ಕಾಳನ್ನೊ,  ಆಲಿವ್ ಆಯಿಲ್  ಹಾಕಿ ಅರ್ಧ ಬೇಯ್ಸಿ ಕೊಡ್ತಾರೆ. ಅದರ ಜೊತೆ ಒಂದು ಬಟ್ಟಲು ಅನ್ನ...ಅದೂ ಬರೆ ಮಧ್ಯಾನ್ಹದ ಊಟಕ್ಕೆ. 

 ಬೆಳಗ್ಗೆ  ಮತ್ತೆ ಸಾಯಂಕಾಲ ಒಂದು ತರಕಾರಿ ಜೊತೆಗೆ ಒಂದು ಸೋಯಾ ಬನ್ ಅಷ್ಟೇ. ( ಬೆಳಗ್ಗಿನ ತಿಂಡಿ - 7 .30 ಕ್ಕೆ, ಮಧ್ಯಾನ್ಹ  ಊಟ - 11.30 ಕ್ಕೆ, ರಾತ್ರಿ ಊಟ - 6.30 ಕ್ಕೆ). ನಾವಂತೂ ಆ ಟ್ರೈನಿಂಗ್ ಜೊತೆ ಈ ಅರೆ ಹೊಟ್ಟೆ ಊಟ.. ಕೇಳ್ಬೇಡಿ... ಹೇಗೆ ಪ್ಲ್ಯಾನ್ಸ್ ಮಾಡ್ತ ಇರ್ತೀವಿ ಗೊತ್ತಾ.. ಬೆಂಗಳೂರಿಗೆ ಹೋದ ತಕ್ಷಣ  S N ನಲ್ಲಿ ಇಡ್ಲಿ ವಡೆ ತಿನ್ಬೇಕು, MTR ನಲ್ಲಿ ಊಟ ಮಾಡ್ಬೇಕು, ಅಮ್ಮನ ಕೈನ ಘೀ ರೈಸ್ ತಿನ್ನಬೇಕು ಅಂತ ದಿನಾ  ಮನಸಲ್ಲೇ ಲಿಸ್ಟ್ ಮಾಡಿಕೊಂಡು ಬಾಯಲ್ಲಿ ನೀರೂರುಸಿಕೋತಿದ್ವಿ

 ಅಲ್ಲಿನವರು ಹಾಗೂ ಬೇರೆ ದೇಶಗಳಿಂದ ಬಂದ ಇತರೆ ಟ್ರೇನೀ ಗಳು ... ಚೆನ್ನಾಗಿ ತಿಂತಾರೆ, ನಮಗೆ ಆಲಿವ್ ಆಯಿಲ್ ವಾಸನೆ(ಸುವಾಸನೆ ಕೆಲವರಿಗೆ) ಸೇರೊಲ್ಲ. ಮತ್ತೆ ರಾತ್ರಿ 9 ಕ್ಕೆಲ್ಲಾ  ಹಸಿವು, ಆಗೆಲ್ಲ ಮ್ಯಾಗಿ ನಮ್ಮ ಆಪತ್ಬಾಂಧವ. ಎಲ್ಲಾ ರೂಮ್ ಗಳಲ್ಲೂ ಎಲೆಕ್ಟ್ರಿಕ್  ಕೆಟ್ಲ್ ಇರ್ತ ಇತ್ತು. ಗ್ರೀನ್ ಟೀ ಮಾಡಿಕೊಳ್ಳಲು,. ಸೋ... ನಮಗೆ ಕಪ್ ನೂಡೆಲ್ಸ್ ಮಾಡ್ಕೊಳೋಕೆ ತೊಂದ್ರೆ ಇಲ್ಲ.... ಬಿಸಿ ನೀರು ಕುದಿಸು, ಮ್ಯಾಗಿ ಕಪ್ ಗೆ ಸುರಿ.. ತಿನ್ನು.... ನಮಗೆ ನಿಜವಾಗ್ಲೂ.. ಉಪ್ಪು ಕಾರ ತಿಂದು ಎಷ್ಟೋ.. ಯುಗಗಳಾಗಿ ಬಿಟ್ಟಿದೆಯೋ ಎನಿಸಿಬಿಟ್ಟಿರುತ್ತೆ ಅಲ್ಲಿನ ಊಟ  ಮಾಡಿ , ಆರೋಗ್ಯದ ಕಡೆ ಇಂದ ನೋಡಿದ್ರೆ..Chinese have the best food..."for taste Indian food.. for health Chinese food" ಅನ್ನೋ ಗಾದೆನೇ ಇದೆ...

 ನಮ್ಮ ಮ್ಯಾಗಿ.. ನಾಲಿಗೆ ಸೋಕಿದ ತಕ್ಷಣ .. ಆ ಹದವಾದ ಉಪ್ಪು, ಕಾರ , ಮಸಾಲೆಯ ರುಚಿ .. ಹ್ಮಮ್ಮ್ಮ್ಮ್ಮ್ಮ್.. ಹೇಳೋಕೆ ಪದಗಳೇ ಇಲ್ಲ.. ಅನುಭವಿಸಿಯೇ ತೀರಬೇಕು.ನಮ್ಮ ಕಣ್ಣಲಿ ನೀರು ಬರೋದೊಂದು ಬಾಕಿ.. ಸಂತೋಷದಿಂದ.
                              .
ಮೊನ್ನೆ ಮೊನ್ನೆ.. ಮೇ ನಲ್ಲಿ ಹಾಂಗ್‌ಕಾಂಗ್ ಗೆ ಹೋಗಿದ್ವಿ.. ಕೀರ್ತಿ, ಇಂಟರ್‌ನ್ಯಾಶನಲ್ ವೂಶೂ ಮತ್ತು ಕುಂಗ್ ಫೂ ಟೂರ್ನಮೆಂಟ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ್ರು....5 ದಿನದ ಟೂರ್ನಮೆಂಟ್. ನಾನು ಇದುವರೆಗೂ ಹಾಂಗ್‌ಕಾಂಗ್ ಗೆ 5 ಸಲ ಹೋಗಿದೆನೆ. ಆದ್ರೆ  This was the best trip ever, ಅಲ್ಲಿನ ಆರ್ಗನೈಸರ್ಸ್ ನಮಗೆ 5 ಸ್ಟಾರ್ ಹೋಟೆಲ್ ನಲ್ಲಿ ಅಕ್ಕೋಮೊಡೇಶನ್ ಒದಗಿಸಿದ್ರು.(ನೀವು ಹಾಂಗ್‌ಕಾಂಗ್ ಹೋಗೋ ಹಾಗಿದ್ರೆ, ನಾನು ನಿಮಗೆ ಪ್ರಿಫರ್ ಮಾಡೋದು The L hotel in Nina tower) . 80 ಅಂತಸ್ತಿನ ಕಟ್ಟಡ, ನಮ್ಮ ರೂಮ್ ಇದ್ದದ್ದು 57ನೇ ಅಂತಸ್ತಿನಲ್ಲಿ.  ಅಲ್ಲಿನ ಲಿಫ್ಟ್ ಗಳು ಎಷ್ಟು fast ಅಂದ್ರೆ, 57ನೇ ಅಂತಸ್ತಿಗೆ ಒಂದು ನಿಮಿಷಕ್ಕಿಂತ ಬೇಗನೇ  ರೀಚ್ ಆಗ್ತಿದ್ವಿ.

A view from  57th floor room in L hotel, Hong kong.

ಅಲ್ಲಿನ ರೂಮ್ ಗಳು, 30* 40 ಸೈಟ ನಷ್ಟು ದೊಡ್ಡದು (ನಮ್ಮ ಬೆಂಗಳೂರಿನ ಇಡೀ ಮನೆಯಷ್ಟು)... ಬಾಲ್ಕನೀ ಇಂದ ಕೆಳಗೆ ನೋಡೋದೇ ಒಂದು ಮಜಾ....ಇನ್ನು  ಬ್ರೇಕ್‌ಫಾಸ್ಟ್ .... The L hotel  ನಾ ಬಫೆನಲ್ಲಿ. ಥೇಟ್ ಅಮೆರಿಕನ್ ಸ್ಟೈಲ್ & ಚೈನೀಸ್ ಸ್ಟೈಲ್. ಸರಿ ಹೇಗೋ ಗಡದ್ದಾದ ತಿಂಡಿ ಮುಗಿಸಿ ಟೂರ್ನಮೆಂಟ್ ಗೆ ಹೋದ್ರೆ.. ಮಧ್ಯಾನ್ಹ  ಊಟ ಬೇಡ ಅನ್ನಿಸ್ತಿತ್ತು, ಆದ್ರೆ ರಾತ್ರಿ ಊಟಕ್ಕಾಗಿ ಪರದಾಡ್ತಿದ್ವಿ.

ಯಾಕೆ ಅಲ್ಲಿ ಹೋಟೆಲ್ ಗಳಿರಲಿಲ್ಲವ ನಿಮ್ಮ ಊಟಕ್ಕೆ ಅಂತ ನೀವು ಕೇಳ ಬಹುದು... ಆದ್ರೆ ಅಲ್ಲಿ ಹೋಗಿ ನೀವು ನಾನ್ವೆಜ್ ಅಲ್ಲ ವೆಜ್ ಊಟ ಬೇಕು ಅಂತ ಅವರಿಗೆ ವಿವರಿಸೋದರಲ್ಲಿ .... ಬೆಳಗಾಗಿರುತ್ತೆ. ಅವರಿಗೆ ಮೀನು, ಮೊಟ್ಟೆ ವೆಜ್ ಫುಡ್. ಮತ್ತು  ಅವರ ಗ್ರೇವೀ ಇಂದ... ಮಾಂಸದ ತುಂಡನ್ನು ತೆಗೆದು ಹಾಕಿದರೆ ಅದೇ ವೆಜ್ ಫುಡ್. ಅದಕ್ಕಾಗಿ ಇದೆಲ್ಲ ಸರ್ಕಸ್ ಬೇಡ ಅಂತ ನಾವು ನಮ್ಮ ಮ್ಯಾಗಿ ಇಟ್ಟೊಕೊಂಡಿರ್ತಿದ್ವಿ. ಜೊತೆಗೆ ಅಲ್ಲಿ  ತಾಜಾ ಹಣ್ಣುಗಳಿಗೆ ಬರವಿಲ್ಲ. ಹಾಗಾಗಿ ಹಣ್ಣುಗಳನ್ನು ಕೊಂಡು ತಿಂತಿದ್ವಿ. ಸೋ ಆಗೆಲ್ಲ ನಮಗೆ ಹೊಟ್ಟೆ ತುಂಬಿಸಿದ್ದು ಈ ಮ್ಯಾಗಿ ಕಪ್ ನೂಡಲ್ಸ್. 

ಆ ಮಳೆಯಲೀ .. ಚಳಿಯಲೀ.. ಬಾಲ್ಕನೀಯಲ್ಲಿ ಕೂತ್ಕೊಂಡು.. ಒಂದು ದೊಡ್ಡ ಕಪ್ ಗ್ರೀನ್ ಟೀ ಮತ್ತೆ ಬಿಸಿ ಬಿಸಿ ನೂಡಲ್ಸ್ ತಿಂತಾ ಇದ್ರೆ .. ಅದರ ಮಜಾನೇ ಬೇರೆ.
ಕೀರ್ತಿ with his gold medals

ಹಾ.. ಹ.. ಹೇಳೋದೇ ಮರ್ತೇ ನೋಡಿ.. ಕೀರ್ತಿ ಹಾಂಗ್‌ಕೋಂಗ್ ಟೂರ್ನಮೆಂಟ್ ನಲ್ಲಿ ಎರೆಡು ಗೋಲ್ಡ್ ಮೆಡಲ್ ಗೆದ್ದು ಬಂದ್ರು... ಅದಕ್ಕೆ ಹೇಳಿದ್ದು "This was the best trip ever" ಅಂತ.  


ಹೂಂ.. ಮತ್ತೆ ಈಗ ಮುಂದಿನ ಸರ್ತಿ ನಾವು ಚೀನಾ ಕೆ ಹೋದಾಗ ನಮ್ಮ ಹಸಿವನ್ನು, ನಾಲಿಗೆಯ ರುಚಿಯನ್ನೂ ತಣಿಸೋದು ಹೇಗೆ ಅನ್ನೋದು..ಈಗಿನಿಂದಲೇ  ಚಿಂತೆಯಾಗಿ ಬಿಟ್ಟಿದೆ ನಂಗೆ.


ಇಷ್ಟೂ ವರ್ಷಗಳು ಮ್ಯಾಗಿ ನಮಗೆ ಆಪತ್ಬಾಂಧವ. ಆದರೆ ಈಗ ಮ್ಯಾಗಿ... ಮ್ಯಾಗಿ... ನೀನ್ಯಾಕೆ ಹೀಗೆ ಮಾಡಿದೆ... ನಿನ್ನ ಮರೆತರೂ ಮರೆಯಲಿ ಹ್ಯಾಂಗ... ಹಸಿದಿದ್ದಾಗ.. ನಾಲಿಗೆ ಕೆಟ್ಟು ಕೇರವಾಗಿದ್ದಾಗ ನೀನು ತೋರಿಸಿದ  ರುಚಿ, ಸ್ವಾದ.. ಆತ್ಮೀಯತೆ.. ಹೇಗೆ ಮರೆಯಲಿ. 


ಅದಕ್ಕೋಸ್ಕರ ಈ ನನ್ನ ಲೇಖನ, ನಿನಗೆ ಮುಡಿಪು.. I sincerely dedicate this article to you Maggie...

ಹಾಗೆ ಈ ಆರ್ಟಿಕಲ್ ಬರೆಯೋಕೆ ಇನ್ಸ್ಪಿರೇಶನ್ ಆದ ನೆನಪಿನ ಸಂಚಿಯಿಂದ ಮಾಲತಿ ಯವರಿಗೂ  ನನ್ನ ಧನ್ಯವಾದಗಳು.


ಓದುವ ನಿಮ್ಮೆಲರಿಗೂ ಸಹ ನನ್ನ ಧನ್ಯವಾದಗಳು.




Thursday 4 June 2015

ಮರುಜನ್ಮ.. ...ಸಣ್ಣ ಕಥೆ

"ಅತ್ತಿಗೆ, ನಿಮ್ಮ ಕೈ ಮುಗಿತೇನೆ, ನನ್ನ ದಯವಿಟ್ಟು ಒಳಗೆ ಕಳಿಸಬೇಡಿ, ನನ್ನ ಕೈಲಾಗೊಲ್ಲ.. ಅವರು ನನ್ನ ಮುಕ್ಕಿಬಿಡ್ತಾರೆ" ರೂಮಿಗೆ ಹೋಗಲು ನಿರಾಕರಿಸಿ ಅಳುತ್ತಿದ್ದಳು ವೇದಾ. ಕೆದರಿದ ತಲೆ, ಕಚ್ಚಿದ ಗುರುತು ಒಂದು ಕೆನ್ನೆಯ ಮೇಲಾದರೆ, ಅಂಗೈ ಗುರುತು ಇನ್ನೊಂದರ ಮೇಲೆ. ಆಸ್ತವ್ಯಸ್ತಗೊಂಡ ಸೀರೆ ದೈನ್ಯ ಮುಖ. ಇದ್ಯಾವುದೂ  ಶಾಂತಾ ಅತ್ತಿಗೆ(ಗಂಡನ ಅಕ್ಕ) ಮೇಲೆ  ಯಾವುದೇ ಪರಿಣಾಮ ಬೀರಲಿಲ್ಲ. ಬದಲಿಗೆ "ಗಂಡನಿಗೆ ಸುಖ ಕೊಡಲಾರದ ನೀನೆಂಥ ಹೆಂಡ್ತಿಯೆ ಅವನಿಗೆ, ಹೋಗ್ಲಿ ಬಾ"ಎಂದು ತನ್ನ ರೂಮಿಗೆ ಕರೆದೊಯ್ದು , ಮುಖ ತೊಳೆಸಿ, ಬೇರೆ ಸೀರೆ ಉಡಿಸಿ ತಲೆ ಬಾಚಿ ಅಲಂಕರಿಸಿದಳು. 17 ವರ್ಷದ ಮುಗ್ದ ವೇದಾ ಎಲ್ಲದಕ್ಕೂ ಮೂಕವಾಗಿದ್ದಳು, ಗಂಡನಲ್ಲಿಗೆ ಕಳಿಸದಿದ್ದರೆ ಸಾಕು .ತಾನು ಬೇರೆ ಏನು ಬೇಕಾದರೂ ಮಾಡಲು ಸಿದ್ಧ. ವೇದಾಳ ಕೈ ಹಿಡಿದು ಕರೆದೊಯ್ದಳು ಶಾಂತಾ... ತಲೆ ತಗ್ಗಿಸಿ ಬರುತ್ತಿದ್ದ ವೇದ... ಗಂಡನ ರೂಮಿನ ಎದಿರುಗೆ ಬಂದು ನಿಂತಾಗ... ಬೆಚ್ಚಿದಳು. ದೈನ್ಯವಾಗಿ ಶಾಂತಳತ್ತ ನೋಡಿದಳು. ಶಾಂತಳಿಗೆ ಅದರ ಅರ್ಥ ಗೊತ್ತಿದ್ದರೆ ತಾನೇ...ಕುತ್ಸಿಕತೆ, ಕ್ರೌರ್ಯವಾಗಿ  ನಕ್ಕು,"ಲೋ. ಶ್ರೀಧರಾ, ನಿನ್ನ ಅಪ್ಸರೆ ಬಂದಿದಾಳೆ ನೋಡೋ" ಎಂದು ರೂಮಿನ ಒಳಗೆ ತಳ್ಳಿ ಬಾಗಿಲೇಳೆದುಕೊಂಡ್ಲು.


ರೂಮೊಕ್ಕ ವೇದಾ ತರ ತರ ನಡುಗುತ್ತಿದ್ದಳು, ಅವಳ ಏಳೇ ದೇಹ ಕಂಪಿಸುತ್ತಿತ್ತು, ಕೈ ಮುಗಿದಳು ಗಂಡನತ್ತ ನೋಡಿ. ಮಾತು ಹೊರಡಲಿಲ್ಲ ಬಾಯಿಂದ."ನನ್ನಿಂದ ತಪ್ಪಿಸಿಕೊಂಡು ಎಲ್ಲಿ ಹೋಗಬಹುಬಹುದಂದುಕೊಂಡಿದ್ದೆ.....! ನನ್ನ ಸ್ವೀಟ್ ವೇದು..." ಎಂದು ಹತ್ತಿರ ಬಂದವನತ್ತ ನೋಡದೆ, ತಪ್ಪಿಸಿಕೊಳ್ಳಲು ಎಲ್ಲಾದರೂ ಜಾಗವಿರುವುದೇನೋ ಎಂದು ಅತ್ತಿತ್ತ ನೋಡಿದಳು. ಇಲ್ಲಾ... ಅಷ್ಟರಲ್ಲೇ, ಮೃಗದಂತೆ ಅವನ ಬಿಗಿ ಬಂದನದಲ್ಲಿದ್ದಳು. ತಪ್ಪಿಸಿಕೊಳ್ಳುವ ಮಾತೆಲ್ಲಿ.... ಅವಳು ಒದ್ದಾಡಿದಷ್ಟು, ಅವನ ಹಿಂಸೆ, ವಿಕೃತತೆ ಹೆಚ್ಚಾಗು ತ್ತಿತ್ತು . ಸಹಿಸಲಾರದೆ, ಜ್ಞಾನ ತಪ್ಪಿದಳು ವೇದಾ.


ಜ್ಞಾನ ಬಂದಾಗಲೂ, ಅದೇ ಪರಿಸ್ಥಿತಿಯಲ್ಲಿ ಬಿದ್ದಿದ್ದಳು ವೇದಾ ನೆಲದ ಮೇಲೆ. ಮೈ ಮೇಲೆ ಕೂದಲೆಳೆ ಬಟ್ಟೆಯೂ ಇಲ್ಲದೆ, ಮೈಯೆಲ್ಲಾ ನಜ್ಜು ಗುಜ್ಜಾದ ನೋವು.ಮೈ ಮುದುರಿ  ನಾಚಿಕೆಯಿಂದ ಹಿಡಿಯಷ್ಟಾಗಿ ತಲೆಯೆತ್ತಿ ನೋಡಿದರೆ...., ಎದುರಿಗೆ ಕುಳಿತು ಕಾಯುತ್ತಿದ್ದ ಶ್ರೀಧರ ,ಅವಳು ಎಂದು ಎಚ್ಚರಗೊಂಡಾಳೋ... ಎಂದು, ಅವಳು ಎಚ್ಚರಗೊಂಡಿದ್ದು, ಗಮನಿಸಿ, ಕೈಲಿದ್ದ, ಕ್ಯಾಮರ, ಮತ್ತೆ ಟೀವೀ ಮೇಲೆ ಸರಿಯಾದ ಆಂಗಲ್ ಗೆ ಅಡ್ಜಸ್ಟ್ ಮಾಡಿ ಹತ್ತಿರ ಬಂದವನತ್ತ, ಬೆದರಿದ ಕಂಗಳಲ್ಲೇ ಬೇಡವೆಂಬಂತೆ ಶಕ್ತಿ ಇಲ್ಲದ  ಕೈಗಳನ್ನೆತ್ತಿ  ಬೇಡಿದಳು, ಶ್ರೀಧರನ ಕಂಗಳಲ್ಲಿ ವಿಕೃತ ಕಾಮ ಮತ್ತೊಮ್ಮೆ ವಿಜ್ರುಂಬಿಸಿತು.

ವೇದಾ, ಆಗಷ್ಟೇ PUC ಗೆ ಸೇರಿದ್ದಳು, ಮನೆಯವರ ವಿರೋಧದ ಮದ್ಯೆ ಅಣ್ಣ ವೆಂಕಟೇಶ್  ಒಬ್ಬನೇ ಸಹಾಯಕ್ಕೆ ನಿತದ್ದು. ಸಣ್ಣ ಹಳ್ಳಿಯ ದೇವಸ್ಥಾನದ ಅರ್ಚಕರಾಗಿದ್ದ ಶಂಕರಯ್ಯನವರು ಪಕ್ಕಾ ಸಂಪ್ರದಾಯಸ್ಥರು, ಮೊದಲ ಮಗ ಶಂಕರ ಹುಟ್ಟಿದ, ಹನ್ನೆರೆಡು ವರ್ಷಕ್ಕೆ ಹುಟ್ಟಿದ ಅಪರೂಪದ ಮಗಳು ವೇದಾ. ಅವಳ 15 ನೇ ವರ್ಷದಿಂದಲೇ ಅವಳ ಮದುವೆಗಾಗಿ ತಯಾರಿ ನಡೆದಿತ್ತು, ಮಗಳು ಕಾಲೇಜ್ ಗೆ ಹೋಗುವೆನಂದಾಗ... ದೊಡ್ಡ ವಾಗ್ವಾದವೇ ನಡೆದಿತ್ತು ಮನೆಯಲ್ಲಿ ತಂದೆ ಮಗನಿಗೆ. ಶಂಕರಯ್ಯನವರ ತಾಯಿ ಇನ್ನೂ ಗಟ್ಟಿ ಮುಟ್ಟಾಗಿದ್ದರು, ಶಂಕರಯ್ಯನವರ ಪತ್ನಿಯನ್ನು ಇನ್ನೂ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರು, ಆಕೆಗೆ ತನ್ನತನ ವೆನ್ನುವುದೇ ಇರಲಿಲ್ಲ. ಗಂಡ ಮತ್ತು ಅತ್ತೆಯ ಕೈ ಕೆಳಗೆ ಅವರು ಹೇಳಿದಂತೆಯೇ  ನಡೆಯುತ್ತಿದ್ದರು.... ವೆಂಕಟೇಶ  ಡಿಗ್ರೀ ಮುಗಿಸಿ ಯಾವುದೋ,.. ಖಾಸಗಿ ಕಂಪನೀಯಲ್ಲಿ ಅಕೌಂಟೆಂಟ್ ಆಗಿದ್ದ.. ತನ್ನ ತಂಗಿಯೂ ಓದಲಿ ಎಂಬ ಆಸೆಯಿಂದ ಅವಳಿಗೆ ಬೆಂಬಲಿಸಿದ್ದ. 

ಆದರೇನು, PUC ಗೆ ಸೇರಿದ ಸ್ವಲ್ಪೇ ದಿನದಲ್ಲಿ ವೇದಾಳಿಗೆ ಸಂಭಂದ ಕುದುರಿ ಬಂದಿತ್ತು. ಹುಡುಗ ಅಮೇರಿಕದಲ್ಲಿ ಯಾವುದೋ ಕೆಲಸದಲ್ಲಿದ್ದ, ಸದ್ಯಕ್ಕೆ ಬೆಂಗಳೂರಿನಲ್ಲೇ ಕೆಲಸವಾಗಿದ್ದರಿಂದ ತಿರುಗಿ ಬಂದಿದ್ದ. ಶಂಕರಯ್ಯನವರು, ತಮ್ಮ ಯೋಗ್ಯತೆಗೆ ಮೀರಿದ ಸಂಬಂಧವೆಂದು, ಸಂತೋಷ ಪಟ್ಟು ಮದುವೆ ಮಾಡಿಕೊಟ್ಟಿದ್ದರು.
ವೆಂಕಟೇಶನ ವಿರೋಧ ಯಾವುದೇ ಲೆಕ್ಕಕ್ಕಿರಲಿಲ್ಲ.. ವೇದಾಳಂತು ಸರಿ... ಅತ್ತೆಯ ಕೈಲಿ ನಡುಗುವ ಅಮ್ಮನ ಮಗಳು... ಇನ್ನೇನನ್ನು  ನೀರಿಕ್ಷಿಸಲು ಸಾಧ್ಯ.. ಕಣ್ಮುಚ್ಚಿ ಕುತ್ತಿಗೆಯೋಡ್ಡಿದ್ದಳು. 


ಮದುವೆಯ ದಿನವೇ.. ವೇದಾಳನ್ನು ಬೆಂಗಳೂರಿಗೆ ಕರೆ ದೊಯ್ದಿದ್ದರು ಶ್ರೀಧರನ ಮನೆಯವರು(ಶ್ರೀಧರನಿಗೆ ತಂದೆ ತಾಯಿ ಇಲ್ಲ, ಗಂಡ ಸತ್ತ ಮೇಲೆ  ತಮ್ಮನೊಡನಿದ್ದ  ಅಕ್ಕ ಶಾಂತಾ ಒಬ್ಬಳೇ.). ಮೊದಲ ರಾತ್ರಿಯೇ.. ವೇದಾಳಿಗೆ  ನರಕ ದರ್ಶನವಾಗಿತ್ತು. ಅಮೇರಿಕ ದಿಂದ ತಂದ...ಕಾಮಕೇಳಿಯ.. ಕಸ್ಸೆಟ್ಸ್ TV ಯಲ್ಲಿ ಹಾಕಿ.. ವೇದಾಳನ್ನು ನೋಡಲು ಒತ್ತಾಯಿಸಿ ಅಂತೆಯೇ ಅವಳ ಮೇಲೆ ಅತ್ಯಾಚಾರವೆಸಗಿದ್ದ ( ಹೆಣ್ಣಿಗೆ ಇಷ್ಟವಿಲ್ಲದ ಮೇಲೆ ಅವಳು ವೈಶ್ಯೆ ಯೇ ಆಗಿರಲಿ.. ಅದು ಅತ್ಯಾಚಾರವೇ ಸೈ ಅಲ್ಲವೇ....??).ಅದಕ್ಕೆ.. ತಕ್ಕಂತೆ ಅವನ ಅಕ್ಕ ಶಾಂತಾ... ತಾನೂ ನಾದಿನಿಯ ಮೇಲೆ ತನ್ನ ಮಾನಸಿಕ ವಿಕೃತತೆಯನ್ನು ತೋರಿಸಿಕೊಳ್ಳುತ್ತಿದ್ದಳು.. ಬೇಕೆಂದೇ  ವೇದಾಳನ್ನು ಶೃಂಗರಿಸಿ.. ಅವನ ರೂಮಿಗೆ ತಳ್ಳಿ, ಹೊರಗಿಂದ ಚಿಲಕ ಹಾಕಿಕೊಳ್ಳುತ್ತಿದ್ದಳು.
ಶ್ರೀಧರ ನದು ತೀರಲಾರದ ದಾಹ.. ಕಾಮುಕತೆ.. ವಿಕೃತತೆವೇದಾ... ಮೇಲೆ ಎಸಗಿದ ಅತ್ಯಾಚಾರದ ವೀಡಿಯೋ ಮಾಡಿ ... ಮತ್ತೆ ಮತ್ತೆ ನೋಡುವುದು.


ಪಕ್ಕದ  ಮನೆಯವರ ಮುಂದೆಲ್ಲ" ಅಯ್ಯೋ... ನನ್ನ ತಮ್ಮನಿಗೆ, ಎಂತಹಾ ಹಳ್ಳಿ ಗೊಡ್ಡು  ಗಂಟು ಬಿದ್ದಿದೆಯಮ್ಮ... ಅವನ ಇಷ್ಟಾ ನಿಷ್ಟ ಗಳನ್ನು ಅರ್ಥವೇ ಮಾಡಿಕೊಳ್ಳೋಲ್ಲ...."ಇನ್ನೂ ಇತ್ಯಾದಿ ದೂರುತ್ತಿದ್ದಳು. ವೇದಾ ರಾತ್ರಿಯಾಯಿತಂದರೆ ಬೆವರಿ ನಡುಗುತ್ತಿದ್ದಳು... ಮದುವೆಯಾಗಿ 1 ತಿಂಗಳಲ್ಲೇ.. ಸೊರಗಿ ಸೊಪ್ಪಾಗಿದ್ದಳು.  ಶಂಕರಯ್ಯನವರೊಮ್ಮೆ.. ಅಳಿಯನಿಗೆ ಫೋನ್ ಮಾಡಿ.. ಮಗಳನ್ನು ನೋಡಲು ಬರುವೆನೆಂದರೆ... ಶ್ರೀಧರ "ಇಲ್ಲ ಮಾವನವರೇ... ನಿಮ್ಮ ವೇದಾಳೊಟ್ಟಿಗೆ ನಾನು ಹನಿಮೂನ್ ಗೆ ಹೊರಟಿರುವೆ, ಬಂದ ಮೇಲೆ ನಾನೇ ಫೋನ್ ಮಾಡುವೆ" ಎಂದು ನಯವಾಗಿ ನಿರಾಕರಿಸಿದ್ದ.
ವೇದಾ ತನ್ನ ಅಣ್ಣಾ ವೆಂಕಟೇಶನ ಆಫೀಸ್ ಫೋನಿಗೆ ಫೋನ್ ಮಾಡೋಣವೆಂದರೆ.. ಶಾಂತಾಳ ಹದ್ದಿನ ಕಣ್ಣು.. ದಿಕ್ಕು ತೋಚದೆ... ಸುಮ್ಮನಾಗಿದ್ದಳು. ಇದೆ ರೀತಿ ಮುಂದುವರೆದು.ಶ್ರೀಧರನ ವಿಕೃತ ಕಾಮ ತಾಳಲಾರದೆ.. ವೇದಾ ಎರೆಡು - ಮೂರು ಸಲ ಮೂರ್ಛೆಯೋಗಿ, ಜ್ಞಾನ ಬರಲು ಮೂರು ದಿನಗಳೇ ಬೇಕಾಗಿತ್ತು...ಆಗಲೂ ಶ್ರೀಧರನಾಗಲಿ,ಶಾಂತಳಾಗಲಿ, ಅವಳನ್ನು ಆಸ್ಪತ್ರೆ ಗೆ ಕರೆದೊಯ್ದಿರಲಿಲ್ಲ. 


ಅವಳಲ್ಲಿ  ಇನ್ನೇನು ನನಗೆ ಉಳಿದಿಲ್ಲ ಎಂಬ ಭಾವನೆ ಶ್ರೀಧರನಿಗೆ ಬಂದು... ಅವಳ ಕೈಲಿ ಡೈವೋರ್ಸ್ಗೆ ಸೈನ್ ಮಾಡಿಸಿಕೊಂಡಿದ್ದ... ಅವಳ ಅಣ್ಣನಿಗೆ ಫೋನ್ ಮಾಡಿ ಬರಲು ಹೇಳಿದ್ದ. ವೆಂಕಟೇಶ ಬಂದಾಗ, "ಅಣ್ಣಾ ನಾನಿಲ್ಲಿ ಇರೋಕಾಗಲ್ಲ ಅಣ್ಣಾ... " ಎಂದು ತೆಕ್ಕೆ ಬಿದ್ದು ಆಳುತ್ತಿದ್ದ,... ಮೂಳೆ ಚಕ್ಕಳವಾಗಿದ್ದ  ತಂಗಿಯನ್ನು ನೋಡಿ... ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.
ಶ್ರೀಧರ ಅವನ ಮೇಲೇ ಗೂಬೆ ಕೂರಿಸಿದಾ "ವೇದಾ ಏನು ಅರಿಯದ ಮುಗ್ದೆ ಅವಳಿಗೆ ಧಾಂಪತ್ಯ ಜೀವನವೇನೆಂಬುದೇ ತಿಳಿಯದು... ನೀವೆಲ್ಲ ಸೇರಿ ನನ್ನ ಬಾಳು ಹಾಳುಮಾಡಿದಿರಿ. ಅವಳನ್ನು ಕರೆದುಕೊಂಡೋಗಿ, ಅವಳೂ ಒಪ್ಪಿ ಡಿವೋರ್ಸೆಗೆ ಸೈನ್ ಮಾಡಿದ್ದಾಳೆ" ಎಂದಿದ್ದ. ವೆಂಕಟೇಶ ಮರು ಮಾತಾಡದೆ.. ತಂಗಿಯನ್ನು ಮನೆಗೆ ಕರೆದು ಕೊಂಡು ಬಂದಿದ್ದ. ಅವಳ ಮೈ ಮೇಲಿನ ಕಚ್ಚಿದ ಗುರ್ತು... ಕೆನ್ನೆಯೆಲ್ಲಾ ಬಾತುಹೋಗಿದ್ದೆ ಸಾಕಿತ್ತು ಅವನಿಗೆ ಇಡೀ ಕಥೆ ಹೇಳಲು.
ಮನೆಯಲ್ಲಿ ದೊಡ್ಡ ಜಗಳವೇ ನಡೆಯಿತು, ಶಂಕರಯ್ಯ ಮಗನನ್ನು ಹಿಡಿದು ಕೆನ್ನೆಗೆ ನಾಲ್ಕು ಬಾರಿಸಿಯೂ ಬಿಟ್ಟರು.. ಅವರಿಗೆ ಮಗಳ ಸ್ಥಿತಿಯ ಬಗ್ಗೆ ಯಾವುದೇ ಕಾಳಜಿಯಿಲ್ಲ.. ಕೇವಲ, ಮರ್ಯಾದೆಯ ಪ್ರಶ್ನೆ... ನೋಡಿದವರು ಏನೆಂದಾರು.... ನಾವು ತಲೆ ಎತ್ತಿ ತಿರುಗುವುದು ಹೇಗೆ..... !
ಹೆಣ್ಣಾದವಳು  ಗಂಡನ ಮನೆಯಲ್ಲಿರಬೇಕಷ್ಟೆ... ಅವನು ಸಾಯಿಸಿದರು ಅಷ್ಟೇ... ಬಾಳಿಸಿದರೂ ಅಷ್ಟೇ... ಮಗಳನ್ನು ಮತ್ತೆ.. ಅಳಿಯನ ಕಾಲಿಡಿದು.. ಅವನ ಮನೆಗೆ ಬಿಟ್ಟು ಬರಲು ರೆಡೀ ಯಾದಾಗ, ವೆಂಕಟೇಶ ತಡೆಯಾದಾದ.. ತಂಗಿಯ ಕೈ ಹಿಡಿದು.. ಮನೆಯಿಂದ ಹೊರ ಬಂದಿದ್ದ " ಅಪ್ಪಾ... ನೀವು ಒಬ್ಬ ತಂದೆಯಾ... ಅವಳ ಸ್ಥಿತಿ ಏನು ಅಂತ ಕಣ್ಣಿಗೆ ಕಟ್ಟಿದಂತಿದೆ.. ಮತ್ತೆ ಅದೇ ನರಕಕ್ಕೆ ತಳ್ಳಲು ಸಿದ್ದರಾಗಿದ್ದೀರಲ್ಲ.. ನಿಜಕ್ಕೂ ನೀವು ಮನುಷ್ಯರೇನಾ... ಬೇಡ.. ನನ್ನ ತಂಗಿಗೆ ನಾನು ಇದ್ದೇನೆ" ಏನು ಹೇಳಲು ಮರೆತಿರಲಿಲ್ಲ .


ತಂಗಿಯೊಡನೆ ಬೆಂಗಳೂರಿನಲ್ಲಿ ಮನೆ ಮಾಡಿ ಇರತೊಡಗಿದ್ದ. ಆದರೆ ವೇದಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತಳಾಗಿದ್ದಳು. ಡಾಕ್ಟರ್ ಹೇಳಿದ್ದರು... "ಸಾಮೂಹಿಕವಾಗಿ ಹತ್ತು ದಿನ ಒಂದೇ ಸಮನೆ ಅತ್ಯಾಚಾರವೆಸಗಿದಂತಿದೆ ನಿಮ್ಮ ತಂಗಿಯ ದೇಹಸ್ಥಿಥಿ.. ".. ವೆಂಕಟೇಶ... ಆಸ್ಪತ್ರೆ ಎಂದೂ ನೋಡದೆ ಡಾಕ್ಟರ್ ಕೈಹಿಡಿದು ಭೋರೆಂದು ಅತ್ತಿದ್ದ .
"ವೇದಾ ಗರ್ಭವತಿಯೂ ಹೌದು, ಆದರೆ ಆಕೆ ಇರೋ ಸ್ಥಿತಿಲಿ ... ಅಬಾರ್ಶನ್  ಮಾಡುವುದೇ ಒಳ್ಳೆಯದು... ಮಾಡದಿದ್ದರೂ ಮುಂದೆ.. ಸುಮಾರು ಪ್ರಾಬ್ಲಮ್ಸ್ ಆಗುತ್ತವೆ,ಅಬ್‌ನಾರ್ಮಲ್ ಮಗು ಆಗುವ ಚಾನ್ಸಸ್ ಸಹ ಹೆಚ್ಚು" ಎಂದಾಗ  ವೆಂಕಟೇಶ ಎಲ್ಲದಕ್ಕೂ ಒಪ್ಪಿ ಸಹಿ ಮಾಡಿದ್ದ. ಸತತವಾಗಿ 3 ತಿಂಗಳ ಚಿಕಿತ್ಸೆ, ಕೌನ್ಸೆಲಿಂಗ್ ಗಳಿಂದ ..ವೇದಾ ಒಂದು ಮಟ್ಟಿಗೆ ಸುಧಾರಿಸಿಕೊಂಡಳು. 

ವೇದಾ ಮತ್ತೆ ಓದಲು ನಿರ್ಧರಿಸಿ, ಅಂತೆಯೇ..PUC  ಗೆ ಸೇರಿದ್ದಳು.
ವೆಂಕಟೇಶ.. ತನ್ನ ಆಫೀಸ್ ನಲ್ಲೇ ತನ್ನ ಸಹದ್ಯೋಗಿಯಾದ.. ವೀಣಾಳನ್ನು, ಮದುವೆಯಾದ.. ವೀಣಾ.. ನಿಜಕ್ಕೂ ವೇದಾಳ ಪಾಲಿಗೆ ದಾರಿದೀಪ. ತಾಯಿ, ಅಕ್ಕ, ಅತ್ತಿಗೆ, ಸ್ನೇಹಿತೆ ಎಲ್ಲವೂ ಆಗಿದ್ದಾಳೆ.


ಈಗ ವೇದಾ.. ತನ್ನ Mcom ಮುಗಿಸಿ ದೊಡ್ಡ  ಮಲ್ಟಿನ್ಯಾಶನಲ್  ಕಂಪನೀ ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ. ಮೊದಲಿನ ಮುಗ್ದತೆ ಮುಖದ ಮೇಲೆ ಹಾಗೆ ಇದೆ. ಆದರೆ ಸ್ವಾಬಿಮಾನ ...ಆತ್ಮಸ್ಥೈರ್ಯ , ಸ್ವಾತಂತ್ರ್ಯ,  ಸ್ವಾವಲಂಬಿ ಬದುಕು ಅವಳನ್ನು ತುಂಬಾ ಎತ್ತರಕ್ಕೇರಿಸಿದೆ. ಹಿಂದಿನದೆಲ್ಲ ಅವಳಿಗೆ ನೆನಪೇ ಇಲ್ಲವೆನ್ನುವಷ್ಟು ಬದಲಾಗಿದ್ದಾಳೆ. ಬರುವ ನಾಳೆಗಳನ್ನು ಒಬ್ಬಳೇ ಎದುರಿಸಬಲ್ಲಳು. ಮರುಜನ್ಮ ಕೊಟ್ಟ ಅಣ್ಣಾ ಅತ್ತಿಗೆ ಅವಳ ಪಾಲಿಗೆ ಸರ್ವಸ್ವ... 


ಆದರೆ ಇನ್ನೂ, ಅವಳ ತಂದೆ ಶಂಕರಯ್ಯ ಮತ್ತು ಅಜ್ಜೀ, ಇವರಿಬ್ಬರನ್ನೂ ಕ್ಷಮಿಸಿಲ್ಲ.. ನೋಡಲೂ ಬಂದಿಲ್ಲ. ಇಷ್ಟು ವರ್ಷಗಳಲ್ಲಿ.. ವೇದಾ ತಾಯಿ.. ಮಗಳಿಗಾದ ಅನ್ಯಾಯಕ್ಕೆ, ಮಗನನ್ನು ನೋಡದೆ..ಗಂಡನ ಬಳಿ ತನ್ನ ಆಸೆ ,ಅಭಿಪ್ರಾಯ ವ್ಯಕ್ತಪಡಿಸಲಾಗದೆ    ಕೊರಗಿ,ಕೊರಗಿ ಇಹಲೋಕ ತ್ಯಜಿಸಿದ್ದರು. ಆದರೆ ಶಂಕರಯ್ಯ ಮತ್ತು ಅವರ ತಾಯಿ ಮಾತ್ರ.. ವೇದಾ ಮತ್ತು ವೆಂಕಟೇಶನ ಅಪರಾಧವನ್ನು.....(???) ಕ್ಷಮಿಸಿಲ್ಲ.