Wednesday 13 May 2015

ಪ್ರಥಮ...???

"ಸೆಕೆಂಡ್ ಪೀ ಯು ಸೀ ರಿಸಲ್ಟ್ ಬಂದಿದೆ, ನೋಡೋಕ್ ಬರ್ತೀಯಾ" ಅಂತ ಫೋನ್ ಮಾಡಿದ್ದ ಗೆಳತಿಗೆ, "ಇಲ್ಲ ವಸಂತ, ನನ್ನ ತಮ್ಮ ಬೆಳಿಗ್ಗೇನೇ ಇಂಟರ್‌ನೆಟ್ ನಲ್ಲಿ ಚೆಕ್ ಮಾಡಿದಾನೆ, ನನ್ ಮಾರ್ಕ್ಸೆಲ್ಲ ಗೊತ್ತಾಗಿದೆ. ನೀನು ಹೋಗಿ ನೋಡಿಕೊಂಡು ಬಾ" ಎಂದೆಳೆ ಫೋನಿಟ್ಟೆ. 


ಕಾಲೇಜ್ ಗೆ ಸೆಕೆಂಡ್ ಹೈಯೆಸ್ಟ್, ಮಾರ್ಕ್ಸ್ ಸ್ಕೋರ್ ಮಾಡಿದ್ದರು ಯಾಕೋ.... ಎಂಜಾಯ್ ಮಾಡುವ ಸ್ತಿತಿಯಲ್ಲಿರಲಿಲ್ಲ.    ಥರ್ಡ್ ಕ್ಲಾಸ್ ನಲ್ಲಿ ಪಾಸ್ ಮಾಡಿದ್ದಾಗ ಮಾತಾಡಿಸದೆ ಇದ್ದ ಅಣ್ಣಾ (ಅಪ್ಪ), ಈಗ ತುಂಬಾನೇ ಖುಷಿಯಾಗಿದ್ರು.ಅಮ್ಮ ಅಕ್ಕ ಪಕ್ಕಾದೋರಿಗೆಲ್ಲ ಹೇಳಿ ಬಂದಿದ್ರು... ಆದ್ರೂ ಮನ ಅರಳಲೆ ಇಲ್ಲ.


ನಾನು..ಓದೋದ್ರಲ್ಲಿ ಫರ್ಸ್ಟ್ ರಾಂಕ್ ಸ್ಟೂಡೆಂಟ್ ಅಲ್ಲದಿದ್ರು.. ದಡ್ಡಿ ಅಂತೂ ಇಲ್ಲ. ಫರ್ಸ್ಟ್ ಕ್ಲಾಸ್ ಬರ್ತಾಳೆಅಂತ ಇದ್ದ ಅಣ್ಣನಿಗೆ, ನಾನು ಥರ್ಡ್ ಕ್ಲಾಸ್ ನಲ್ಲಿ sslc ಪಾಸ್ ಮಾಡ್ದಾಗ, ತುಂಬಾನೇ ಬೇಸರ ಆಗಿತ್ತು. ನನ್ನ ಮಾತೂ ಆಡಿಸಿರಲಿಲ್ಲ. ಅಮ್ಮ ನೂ ಚೆನ್ನಾಗಿ ಬೈದಿದ್ರು... ಆದ್ರೂ ಆಮೇಲೆ ಸಮಾಧಾನ ಮಾಡಿದ್ರು.... !ನಮ್ಮೂರಲ್ಲಿ ಫೇಲ್ ಆದಡ್ದ್ಕೆ ಒಬ್ಬಳು ಅತ್ಮಹತ್ಯೆ ಮಾಡಿಕೊಂಡಿದ್ದಳಲ್ಲ ಅದಕ್ಕೆ ಇರಬೇಕು ಅಂತ ಈಗ ಅನ್ನಿಸುತ್ತೆ.


ಸರಿ ಥರ್ಡ್  ಕ್ಲಾಸ್ ಗೆ ಸೈನ್ಸ್ ಗೆ ಯಾರು ಸೇರಿಸಿಕೊಳ್ತಾರೆ, ಆರ್ಟ್ಸ್ ಗೆ ಸೇರಿದ್ದಾಯ್ತು... ಯಾರ ಸಲಹೆಯೂ ಇಲ್ಲದೆ( ಅಣ್ಣಾ ಅಂತೂ... ಮಾತೇ ಆಡಿರಲಿಲ್ಲ). ಬೇರೆ ಬೇರೆ ಸ್ಚೂಲಿಂದ ಬಂದ ಹುಡುಗಿಯರೆಲ್ಲ ಗೆಳತಿಯರಾದರು ಕಾಲೇಜ್ ನಲ್ಲಿ..... ತುಂಬಾ ಆತ್ಮೀಯಳಾಗಿದ್ದು "ಶ್ರೀ ಲೇಖಾ'.


ಶ್ರೀ ಲೇಖ ಚೆಂದದ ಹುಡುಗಿ, ಓದುವುದರಲ್ಲೂ ... sslc ನಲ್ಲಿ, 75% ಇದ್ದರೂ ಆರ್ಟ್ಸ್ ಗೆ ಸೇರಿದ್ದ್ಳು. ನಂತರ ತಿಳಿದು ಬಂದದ್ದು , ಅವರದು ತೀರಾ ಬಡತನ, ತಂದೆ ದೇವಸ್ಥಾನ ದ ಅರ್ಚಕ, ಮೂರು ಮಕ್ಕಳು, ಮಡದಿಯ ಸಂಸಾರ ಅದರಲ್ಲೇ ತುಂಬ ಬೇಕಿತ್ತು. ಸೈನ್ಸ್ ಒದಿಸೂ ಶಕ್ತಿ ಇರಲಿಲ್ಲ ಆದರೂ ಓದುವ ಆಸಕ್ತಿ ಇಂದ ಆರ್ಟ್ಸ್ ಗೆ ಸೇರಿದ್ದಳು ಶ್ರೀ ಲೇಖ.
ನಾವಿಬ್ಬರೂ ತುಂಬಾ ಆತ್ಮೀಯರಾಗಿ ಬಿಟ್ಟೆವು, ಕೆಲವೇ ದಿನಗಳಲ್ಲಿ ನನಗೂ... ಚೆನ್ನಾಗಿ ಓದುವ ಆಸಕ್ತಿ ಹುಟ್ಟಿಕೊಂಡಿತ್ತು ಅವಳಿಂದಾಗಿ. ಅವ್ಳು ತುಂಬಾನೇ ಸಹಾಯ ಮಾಡ್ತಿದ್ಳುಕೂಡಾ .

ಆಗ ತಾನೇ ಹರೆಯಕ್ಕೆ ಕಾಲಿಟ್ಟಿದ್ದ ನಾವೆಲ್ಲರೂ... ಮದುವೆ, ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಾಣುತ್ತಿದ್ದೆವು.. ಯಾವುದಾದರೂ ಒಂದು ಕ್ಲಾಸ್ ಇಲ್ಲದಿದ್ದಾಗ ಗುಂಪಾಗಿ ಕೂತು ಹರಟುತ್ತಿದ್ದೆವು... ಆದರೆ ಶ್ರೀ ಲೆಖಾ... ತನ್ನ ಕನಸಿನ ರಾಜಕುಮಾರ ನಾ ಬಗ್ಗೆ ಮಾತೆ ಆಡುತ್ತಿರಲಿಲ್ಲ...ಕೇಳಿದರೆ, "ಸದ್ಯ ನಾನು ಪೀ ಯು ಸೀ ಮುಗಿಸಿದರೆ ಸಾಕಾಗಿದೆ, ನಮ್ಮ್ಮ ಮನೆಯಲ್ಲಿ ಮದುವೆ ಮಾಡಿ ನನ್ನ  ಈಗಲೇ ಸಾಗಿ ಹಾಕೋಕೆ ರೆಡೀ ಯಾಗಿದರೆ... ಬೆನ್ನ ಹಿಂದೆ ಇರೋ ತಂಗೀರ ಚಿಂತೆ ನಮ್ಮಪ್ಪಂಗೆ" ಎನ್ನುತ್ತಿದ್ದಳು. ಅವರ ಮನೆಯ ಪರಿಸ್ಥಿತಿ ಅರಿವಿದ್ದ ನಾವ್ಯಾರೂ ಹೆಚ್ಚಿಗೆ ಪೀಡಿಸುತ್ತಿರಲಿಲ್ಲ.


ಅವತ್ಯಾಕೋ ಶ್ರೀ ಲೇಖ ತುಂಬಾನೇ ಸಪ್ಪಗಿದ್ದಳು, ಯಾಕೆ ಅಂತ ತುಂಬಾ ಸಾರಿ ಪೀಡಿಸಿ ಕೇಳಿದ್ದಕ್ಕೆ ಹೇಳಿದಳು," ನಮ್ಮನೆಲ್ಲಿ ನೆನ್ನೆ ನನ್ನ ನೋಡೋಕೆ ಯಾರೋ ಬಂದಿದ್ದರು ಕಣೆ, ಅವ್ರಿಗೆ ನಾನು ಒಪ್ಪಿಗೆ ಅಂತೇ, ಒಂದು ವಾರದಲ್ಲೇ ಮದುವೆ ಮಾಡಿಕೊಳ್ತರಂತೆ.... ನನ್ನ ಓದು ಅಷ್ಟೇ... " ಅಂತ ಅಳೋಕೆ ಶುರು ಮಾಡಿದೊಳನ್ನ ಹೇಗೆ ಸಮಾಧಾನ ಮಾಡ್ಬೇಕೋ ಗೊತ್ತಾಗಲೇ ಇಲ್ಲ."ನಂಗಿಸ್ಟ್ ಇಲ್ಲ ಅಂತ ಹೇಳು ನಿಮ್ ತಂದೆಗೆ, " ಅಂದೆ. "ಅದೆಲ್ಲ ನಡಿಯೋದಿಲ್ಲವೇ ನಮ್ಮ ಮನೆಲಿ, ನನ್ನ ಒಂದು ಮಾತೂ ಕೇಳೋಲ್ಲ ಇದ್ರ ಬಗ್ಗೆ" ಎಂದು ಸುಮ್ಮನಾದಳು. ನಾನೂ ಅಸಹಾಯಕಿ, ಏನು ಮಾಡಬೇಕು ತೋಚಲಿಲ್ಲ, ಅವಳೇ ಹೇಳಿದ್ಲು, "ಅವರ ಮನೆಯವರು, ತಮ್ಮ ಮನೆಯ ಫೋನ್ ನಂಬರ್ ಕೊಟ್ಟೋಗಿದಾರೆ ನಮ್ಮ ಅಪ್ಪನ ಕೈಲಿ, ನಾನೇ ಅವರ ಮನೆಗೆ ಅನಾಮಧೇಯ ಕಾಲ್ ಮಾಡಿ ಶ್ರೀ ಲೇಖಳ ಚಾರೆಕ್ಟೇರ್ ಚೆನ್ನಾಗಿಲ್ಲ ಅಂತ ಹೇಳಿಬಿಡ್ತೀನಿ, ಆಗ್ಲಾದ್ರೂ ಅವರು ನನ್ನ ಮದುವೆ ಆಗೋಕ್ಕೆ ಒಪ್ಪೊಲ್ಲ, ಅಸ್ಟರಲ್ಲಿ ನನ್ನ ಸೆಕೆಂಡ್ ಪೀ ಯು ಸೀ ಎಗ್ಸ್ಯಾಮ್ ಮುಗಿಯುತ್ತೆ, ನಾನೇ ಎಲ್ಲಾದ್ರೂ ಸ್ಚೂಲ್‌ನಲ್ಲಿ, ಟೀಚರ್ ಆಗಿ ಸೇರಿಕೋತೀನಿ, ನಮ್ಮ ಅಪ್ಪನಿಗೆ ಸ್ವಲ್ಪ ಸಹಾಯ ಆಗುತ್ತೆ" ಎಂದಳು.  ಅವಳ ಮಾತು ಕೇಳಿ ನನಗೆ ಭಯಾನೂ ಆಯ್ತು, "ಬೇಡ ಶ್ರೀ, ಒಂದು ಸಲ ನೀಂ ಅಮ್ಮನ ಹಥ್ರನಾದ್ರು ಮಾತಾಡಿ ನೋಡು" ಅಂದೆ. "ಇಲ್ಲವೇ, ಅವರಂತೂ, 'ನಿಮ್ಮ ಅಪ್ಪ ಹೇಳಿದಾಗೆ ಕೇಳೋಕೇನು ನಿಂಗ' ಅಂತ ನನ್ನೇ ಬೈತಾರೆ" ಅಂದವಳಿಗೆ, ಏನೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ ನಾನು, ಸುಮ್ಮನೆ ಮನೆಗೆ ಬಂದಿದ್ದೆ.


ಮೂರು ದಿನದ ನಂತರ ಖುಷಿಯಾಗಿದ್ದ ಶ್ರೀಲೇಖಾ, ಹೇಳಿದ್ದಳು " ಲೇ, ಅವರು ನನ್ನ ಮದುವೆ ಆಗೋಕೆ ಇಸ್ಟ ಇಲ್ಲ ಅಂತ ಹೇಳಿಬೀಟ್‌ರು ಕಣೇ, ಸದ್ಯಕ್ಕೆ, ಯಾವುದೇ ತೊಂದ್ರೆ ಇಲ್ಲದೆ ಎಗ್ಸ್ಯಾಮ್ ಗೆ ಓದ್ಕೋಬಹುದು, ಒಂದು ಫೋನ್ ಕಾಲ್ ಎಸ್ಟೆಲ್ಲಾ ಬದಲಾಯಿಸ್ತು ನೋಡಿದಯ " ಎಂದವಳನ್ನು, ನೋಡಿ ವಿಚಿತ್ರವೆನಿಸಿತು, ಸದ್ಯ ಅವಳು ಖುಷಿಯಾದ್ಲಲ್ಲ ಅಷ್ಟು ಸಾಕೆನಿಸಿತ್ತು. 


ನಂತರ ಎಗ್ಸ್ಯಾಮ್ ಗಡಿಬಿಡಿಯಲ್ಲಿ, ನಾವಿಬ್ಬರೂ ಸಿಗುತ್ತಿದ್ದದ್ದೆ ಅಪರೂಪ, ಸಿಕ್ಕರೂ, ಪರೀಕ್ಷೆಯ ಬಗ್ಗೆಯೇ ಮಾತುಕತೆ. 


ನಂತರ ಇನ್ನೆರೆಡು ಎಗ್ಸ್ಯಾಮ್ ಇದೆ ಅನ್ನುವಾಗ, ಸಿಕ್ಕ ಶ್ರೀಲೇಖ, "ನಿನ್ನತ್ರ ಅರ್ಜೆಂಟಗಿ ಮಾತಾಡಬೇಕೆಂದಳು", ಸರಿ ಎಂದು ಇಬ್ಬರು , ಲೈಬ್ರರ್ರೀಯಲ್ಲಿ ಮಾತಾಡಲು ಕೂತೆವು, ಬಾಡಿದ್ದ ಅವಳ ಮುಖ ನೋಡಿ,"ಯಾಕೆ ಶ್ರೀ, ಇಸ್ಟೊಂದು ಓದುತ್ತಿದಿಯ, ನಿದ್ದೇನೆ ಮಾಡ್ತಿಲ್ಲ ಅನಿಸುತ್ತೆ  ಹೇಗಿದ್ದರೂ ನೀನೇ ಫರ್ಸ್ಟ್ ಬರೂದು ತಾನೇ" ಎಂದೇ.ಅದಕ್ಕವಳ ಕಣ್ಣಲ್ಲಿ, ಫಳಕ್ಕನೆ ಉದುರಿದ ಕಣ್ಣೀರನ್ನು ಕಂಡು ಘಾಬರಿಯದೆ,"ಯಾಕೆ ಶ್ರೀ, ಏನಾಯ್ತು ಹೇಳಮ್ಮಾ" ಎಂದೆ. 

ಆಕಡೆ ಈಕಡೆ ನೋಡಿ ಕಣ್ಣೀರೋರೆಸಿಕೊಂಡ ಅವಳು,"ನನಗೆ ಮದುವೆ ಫಿಕ್ಸ್ ಆಗಿದೆ ಕಾಣೆ, ಎಗ್ಸ್ಯಾಮ್ ಮುಗಿದ  ಹತ್ತು ದಿನಕ್ಕೆ ಮದುವೆ,  ಈ ಸಲ ಬಂದ ಗಂಡ...ಹಾ ಹ್ಹ ಹ್ಹ  ಹ್ಹ, ಗಂಡ ಅವನು, 45 ವರ್ಷದ ಮುದುಕ, ನನ್ನ ಅನಾಮಧೇಯ ಫೋನ್ ಕಾಲ್ ಗೂ ಹೆದರಲಿಲ್ಲ, ನನ್ನೇ ಮಧುವೆ ಆಗ್ತೀನಿ ಅಂತ ಕೂತಿದಾನೆ, ತುಂಬಾ ಸಾಹುಕಾರ, ನಾನು ಎರಡನೇ ಹೆಂಡತಿ, ನನ್ನ ವಯಸ್ಸಿನ ಮಗ ಇದಾನಂತೆ, ನನ್ನ ಮದುವೆ ಮಾಡಿಕೊಂಡು, ನನ್ನ ತವರು ಮನೆ ಉದ್ದಾರ ಮಾಡ್ತಾನಂತೆ, ನಮ್ಮಪ್ಪನ ತಲೆ ಚೆನ್ನಾಗಿ ಕೆಡಿಸಿ ಒಪ್ಪಿಸಿದನೇ, ನಮ್ಮಪ್ಪ ಮದುವೆ ಡೇಟ್ ಫಿಕ್ಸ್ ಮಾಡಿದ್ಧೂ ಅಯ್ತು'" ಎಂದಳು.ನನಗೂ ಅಳು ಬಂತು, "ಶ್ರೀ , ಏನೇ ಮಾಡೋದು ಈಗ" ಎಂದೆ. "ಏನೂ ಮಾಡೋ ಹಾಗಿಲ್ಲವೇ, ಎಲ್ಲಾದ್ರೂ ಓಡೋಗೋಣ ಅನ್ನಿಸುತ್ತೆ, ಆದ್ರೆ ಎಲ್ಲೊಗ್ಲೀ,...." ಮತ್ತೆ  ಅತ್ತಳು. ಏನೆಂದು ಸಮಾಧಾನ ಮಾಡಲಿ !!! ಸುಮಾರು  ಹೊತ್ತು ಸುಮ್ಮನಿಡ್ವಿ, "ಹೋಗ್ಲಿ ಬಿಡು ನನ್ನ ಹಣೆಲಿ ಬರೆದಾಗೆ ಆಗುತ್ತೆ ," ಎಂದು ನಿಟ್ಟಿಸುರು ಬಿಟ್ಟು ಎದ್ದಳು. ನಾನು ಅವಳ ಭುಜದ ಮೇಲೆ ಕೈ ಹಾಕಿ ನಡೆದೆ.


ನಂತರ ಎಗ್ಸ್ಯಾಮ್ ಮುಗಿದ ನಂತರ ನಮ್ಮ ಮಾವನ ಮದುವೆ ಇದ್ದದರಿಂದ , ನಮ್ಮ ಮನೆಯವರೆಲ್ಲ 1 ವಾರದ ಮುಂಚೆಯೇ ಊರಿಗೊರಟು ಹೋದ್ವಿ, ಹೋಗುವ ಮೊದಲು, ಅವಳನ್ನು ಭೇಟೆ ಯಾಗಿ , ಸಮಾಧಾನ ಮಾಡುವಪ್ರಯತ್ನ ಮಾಡಿದ್ದೆ, ಆದ್ರೆ ಹೇಗೆ.. ಸಾದ್ಯ....!!!.


ಇದೆಲ್ಲ ಆಗಿ ಇಂದಿಗೆ ಒಂದೂವರೆ   ತಿಗಳೇ ಆಗಿದೆ, ಆದ್ರೆ ಶ್ರೀಲೇಖ ಇಲ್ಲ ನನ್ನೊಂದಿಗೆ, ನಾನು ಮಾವನ ಮದುವೆ ಮುಗಿಸಿ ಬರುವಸ್ತರಲ್ಲಿ, ಶ್ರೀಲೇಖಳ, ಸಾವಿನ ಸುದ್ಧಿ ಕಾಯುತ್ತಿತ್ಟು.


 ಹೌದು, ಶ್ರೀ ಲೇಖ ಆತ್ಮಹತ್ಯೆ ಮಾಡಿಕೊಂಡಿದ್ಲು, ಅದೂ ಅತಿ ಘೋರವಾಗಿ, ತನ್ನ ಸುಂದರ ರೂಪವನ್ನ ಸುಟ್ಟುಕೊಂಡು ಪ್ರಾಣ ತೆತ್ತಿದ್ದಳು. ಆತ್ಮಹತ್ಯೆ ನೇ ಅವಳಿಗೆ ಕಂಡ ಏಕೈಕ ದಾರಿ....


ಎದೆ ನಡುಗಿಸುವಂತ ಅವಳ ಕಳೇಬರ ನೋಡಿ , ನಾನು ಒಂದು ವಾರ ಮೇಲೆದ್ದಿರಲಿಲ್ಲ..ಯಾರು ಕೊಟ್ಟರು ಅವಳ ಸುಂದರ ಜೀವನವನ್ನ ಹಾಳು ಮಾಡುವ ಸ್ವತಂತ್ರ ಅವರಪ್ಪನಿಗೆ, ಆ ಮುದಕನಿಗೆ ಇವಳೇ ಬೇಕಿತ್ತೆ ಮದುವೆ ಯಾಗಲು....??? ಇನ್ನೂ ಸ್ವಲ್ಪ ದಿನದಲ್ಲಿ ಅವಳೇ ಕೆಲಸಕ್ಕೆ ಸರಿ... ತನ್ನ ಮನೆ ಯನ್ನು ಅವಳೇ  ಸಾಕುತಿದ್ದಾಳಲ್ಲ.... ಕೊನೆ ಮೊದಲಿಲ್ಲದ ನನ್ನ ಪ್ರಶ್ನೆಗಳಿಗೆ ಯಾರು ಉತ್ತರಿಸಿಯಾರು.... ಆದರೂ ಒಂದುತುಂಬು ಜೀವದ ಬಲಿ ಇಲ್ಲಿ ......ಇಂದು, ಪೀ ಯು ಸೀ ರಿಸಲ್ಟ್ ನಲ್ಲಿ, ಅವಳೇ ಕಾಲೇಜ್ ಗೆ ಫರ್ಸ್ಟ್, ನಾನು ಸೆಕೆಂಡ್. , ಅವಳು ಸಾವಿನಲ್ಲೂ  ಪ್ರಥಮ ಸ್ಥಾನ ನಾ ತಾನೇ ಹೊಡೆದು ಬಿಟ್ಟಳು.


(ನಿಜ ಜೀವನದಲ್ಲಿ ನಡೆದ ಘಟನೆಯಾಧಾರಿತ)


ಚೆಂದದ ಸಲಹೆ, ಪ್ರತಿಕ್ರಿಯೆಗಳಿಗೆ ಕಾಯುತ್ತಿರುತ್ತೇನೆ.


2 comments:

  1. ನಮಸ್ತೆ :) ...ಚೆನ್ನಾಗಿದೆ ಬರಹ :) :) .ಅಭಿನಂದನೆಗಳು ...ಕೊನೆಯ ಸಾಲುಗಳು ಭಾವುಕಗೊಳಿಸುತ್ತವೆ. .ಇನ್ನಷ್ಟು ಬರೆಯಿರಿ :) ಓದಲು ನಾವಿದ್ದೇವೆ :)...
    ಹಾಂ ಒಂದು ಪುಟ್ಟ ಸಲಹೆ... ಆ ಕಡುನೀಲಿ ಬಣ್ಣದ ಬದಲು ಇನ್ಯಾಯುದಾದರೂ ಬಣ್ಣ ಬಳಸಲಾದೀತೆ ನೋಡೀ :).
    ಧನ್ಯವಾದಗಳು ,ಸ್ವಾಗತ ಬ್ಲಾಗಲೋಕಕ್ಕೆ :)
    ನಮಸ್ತೆ :)

    ReplyDelete
  2. Thank u chinmay sir, will surely keep your suggestion in mind.

    ReplyDelete